#OpenPoetry ಹೀಗೊಂದು ಪ್ರಾರ್ಥನೆ🙏 ರವಿಯೇ ಆಗಸವ ತೊರೆದಂತಿದೆ ಧರಣಿಗೆ ಹೊಂಗಿರಣ ಮತ್ತೆ ಬರುವುದೇ? ಗೂಡೊಂದು ಕಳಚಿ, ಬೀಡೊಂದು ಮಡಚಿ ಬಿದ್ದಾಗಲೂ ಮಳೆಯು ನಿಲ್ಲಲಾರದೇ? ತಿಂಗಳ ಹಿಂದೆ, ನಮ್ಮ ಕಣ್ಣ ಮುಂದೆ ಭುವಿಯ ದಾಹದ ಸಂದೇಶ, ಇಂದ್ರಗೆ ಹೋಗಿದೆ ನದಿಯುಕ್ಕಿ ಹರಿದು, ತನ್ನದಾರಿಯ ತೊರೆದು ಇಂದು ಮನೆಹೊಕ್ಕರು, ಪ್ರವಾಹ ಕುಂದಲಾರದೇ? ನಡುಬೀದಿಯ ಜಲಪಾತ, ಬಿರುಕುಗಳ ಪ್ರಪಾತ ಜಲಾಶಯ ಉಕ್ಕುತ್ತಿದೆ ಒಳಹರಿವು ತಡಿಲಾರದೆ ಇಳೆ ಮೇಲಿನ ಪೈರು,ಒಲೆ ಮೇಲಿನ ಸಾರು ಕೈಗೆಟಕುತಿಲ್ಲ ಇದಕೆ ನ್ಯಾಯ ದೊರಕದೇ? ದೈವ ನ್ಯಾಯಾಲಯದಿ, ಸರ್ವಾನುಮತದಿ ಮೊಕದ್ದಮೆ ಹೂಡಿ ವಾದ ಮಂಡಿಸಲಾಗದೇ? ವರುಣನ ರಂಪಾಟಕೆ, ಕರುಣೆಯಿರದ ಮನಕೆ ಜಾನುವಾರಗಳು ಬಳಲುತಿವೆ ತಪ್ಪು ಮಾಡದೇ ವರುಣನ ಅಳುವೋ, ಆಡಂಬರದ ನಗುವೋ ನೊಂದ ಒಂದಿನಿತು ಮನಕೆ ತಿಳಿಯದಾಗಿದೆ ಸೋತು ಶರಣಾಗಿ, ಬೇಡುವೆವು ತಲೆಬಾಗಿ ಇನ್ನಷ್ಟು ಅಗಲಿಕೆಯ ಸಹಿಸಲಾಗದೆ🙏 ಶಿವಪುಷ್ಪ ಸಂಜಾತ✊ #ಕನ್ನಡ #ಕನ್ನಡಕವಿತೆ #ಕನ್ನಡಕವನ #ಕನ್ನಡಕವಿ #ಪ್ರವಾಹ #ಉತ್ತರಕರ್ನಾಟಕ #Kannadapoem #floods