ಕ್ಷೇಮ. ಶುಭಮಸ್ತು ದಿ. ೩೦/೦೧/೨೧ ಚಿ.ಸೌ.ಅ.ಕು.ಶೋ. ಮಂಜುಳಾಗೆ ನಿನ್ನ ಪತಿ ರೇಣುಕೇಶ್ ಮಾಡುವ ಆಶೀರ್ವಾದಗಳು.ಇಲ್ಲಿ ಎಲ್ಲಾ ಕ್ಷೇಮ. ಊರಿನಲ್ಲಿ ಎಲ್ಲಾ ಕ್ಷೇಮವಾಗಿದ್ದರೆಂದು ನಾನು ಭಾವಿಸುತ್ತೇನೆ. ಅ||ಈ||ಉ||ಕು||ಸಾಂ|| ಈಗ ನಿನಗೆ ತಿಳಿಯಪಡಿಸುವುದೇನಂದರೆ, ಊರಿನ ಎಲ್ಲಾ ಸಮಸ್ಯೆಗಳು ಮುಗಿದಿದ್ದರೆ ಮನೆಗೆ ಹೊರಟು ಬಾ. ಇಲ್ಲಿ ನೀನಿಲ್ಲದೆ ಕಾಲ ಕಳೆಯುವುದು ದುಸ್ತರವಾಗಿದೆ. ಆದರೆ ಸಾವಾಕಾಶ ಮಾಡಿ ಹೊರಡು. ಹೊರಡುವ ಮುಂಚೆ ಒಂದು ಕಾಗದ ಬರಿ. ನಾನು ಬಸ್ ನಿಲ್ದಾಣದಲ್ಲಿ ನಿನಗಾಗಿ ಕಾಯುವೆ. ನನ್ನ ನಮಸ್ಕಾರಗಳನ್ನು ಮಾವ, ಅತ್ತೆಯವರಿಗೆ ತಿಳಿಸು ಹಾಗೆ ತಾತ ಅಜ್ಜಿಯವರಿಗೆ ತಿಳಿಸು. ಕಿರಿಯರಿಗೆ ನನ್ನ ಆಶೀರ್ವಾದಗಳು ನಿನ್ನ ಪತ್ರದ ನಿರೀಕ್ಷೆಯಲ್ಲಿ ಆಶೀರ್ವಾದಗಳೊಂದಿಗೆ ರೇಣುಕೇಶ್ ನಿಮ್ಮ ಆತ್ಮೀಯರಿಗೆ ಒಂದು ಪ್ರೀತಿಯ ಪತ್ರ ಬರೆಯಿರಿ. #ಪ್ರೀತಿಯಪತ್ರ #yqjogi #yqkannada #collab #collabwithjogi #YourQuoteAndMine Collaborating with YourQuote Jogi