#ನಿತ್ಯ #ನರಕ ಹಸಿವಿಗಾಗಿ ಹಸಿವಲ್ಲ ಇದೇ ನಮ್ಮ ನಿತ್ಯ ನರಕ ನೋವಿಗಾಗಿ ನೋವಲ್ಲ ಇದೇ ಸತ್ಯದ ದ್ಯೋತಕ ಬಡತನದ ಬೇಗೆಯಲ್ಲಿ ಕನಸು ಕಾಣುವ ಹಕ್ಕಿಲ್ಲ ಉಳ್ಳವರ ಅಟ್ಟಹಾಸದ ಮುಂದೆ ಇಲ್ಲದವರಿಗಿಲ್ಲಿ ಏನೂ ದಕ್ಕಲ್ಲ ಬೆಟ್ಟದಷ್ಟಾಸೆಗಳಿದ್ದರೂ ಒಂದಕ್ಕೂ ಆಸರೆಯ ಸೂರಿಲ್ಲ ಇದ್ದ ನೆರಿಕೆಯ ಒದ್ದು ಬದುಕುವ ಶಕ್ತಿ ಬಡವನಿಗಿಲ್ಲ ನೊಂದರಷ್ಟೇ ಅಲ್ಲ ಇಲ್ಲಿ ಬೆಂದರೂ ಬದುಕು ಕೈ ಹಿಡಿವುದಿಲ್ಲ ಶ್ರಮದ ಬದುಕಿದ್ದರೂ ಜೀವನಪೂರ್ತಿ ಜೀತ ತಪ್ಪಲಿಲ್ಲ ಏಕೆ ಈ ಬಡತನದ ಶಿಕ್ಷೆ ನಮಗಿಲ್ಲವೇಕೆ ಸಿರಿತನದ ರಕ್ಷೆ ದುಡಿದು ದಣಿದು ಮಣಿದಾಯ್ತು ಉಣುವ ಅನ್ನಕೆ ನನ್ನದೆಂಬ ಹೆಸರಿಲ್ಲ ಎಂದಿಗೆ ಕೊನೆಯಾಗುವುದೋ ನಮಗೊದಗಿದ ಈ ಸ್ಥಿತಿ ತಿಥಿ ಆಗುವ ಮುಂಚೆ ಅತಿಥಿಯಾಗಿ ಬರುವುದೇ ಸುಖಬಾಳಿನ ನೀತಿ 0707ಎಎಂ30112018 *ಅಮು ಭಾವಜೀವಿ ಮುಸ್ಟೂರು* #ನಿತ್ಯ #ನರಕ