ರವಿಯೇರಿದ ರಥನೋಡು ಧನದಿಂದ ಮಕರದೆಡೆಗೆ ಜಗಕಾಯುವ ಇನಗೊಂದು ಸಂತಸದ ಆರತಿ. ಇಳೆಯಿಟ್ಟ ಬೆಳೆಗೊಂದು ಹೆಗಲಿತ್ತ ಬಸವಗೊಂದು ಸುಗ್ಗಿತಂದ ಹಿಗ್ಗಿಗೊಂದು ಸ್ವರ್ಗತೆರೆದ ದೇವಗೊಂದು ಸಂತಸದ ಆರತಿ ಗಂಗೆಯಲ್ಲಿ ಮುಳುಗಿ ಒಮ್ಮೆ ಪಾಪಹರಿದು ಪುಣ್ಯಕೊಮ್ಮೆ ದುಡಿದುದಣಿದ ದೇಹಕೊಮ್ಮೆ ಅವನಕರುಣೆ ಪಡೆಯಲೊಮ್ಮೆ ಸಂತಸದ ಆರತಿ ಎಳ್ಳುಬೆಲ್ಲ ಹೊತ್ತು ತಂದ ಸೃಷ್ಠಿ ಸೊಬಗು ಇಂದೆ ಚೆಂದ ಗಾಳಿಪಟವೇ ಬಾನಿಗಂದ ನಕ್ಕು ನಗಿಸೊ ಮಾತುತಂದ ಸಂತಸದ ಆರತಿ. ಮರೆತುಬಿಡುವ ನೋವನೆಲ್ಲ ಮೆದ್ದುಬಿಡುವ ಎಳ್ಳುಬೆಲ್ಲ ಹಂಚುತಿರುವ ಖುಷಿಯನೆಲ್ಲ ಸಂಕ್ರಾಂತಿ ತಂದ ಹಬ್ಬವೆಲ್ಲ ಸಂತಸದ ಆರತಿ. ಮಕರಸಂಕ್ರಾಂತಿ ಶುಭಾಶಯಗಳು ಎಲ್ಲ ಸ್ನೇಹಿತ/ಸ್ನೇಹಿತೆಯರಿಗೆ. #csmayachari #sankrantiwish #poetry #kannadapoem #ಸಂಕ್ರಾಂತಿ #yqquotesbaba #yqdidi #yqquotes