ನಿನ್ನೆದೆಗೊರಗಿ ನನ್ನ ಮನ ಕರಗಿ ಭಾವವಾಯ್ತೊಂದು ಕವಿತೆ ಅದು ಎಂದೂ ಬತ್ತದ ಒರತೆ ಕಾರ್ಗಲ್ಲಿಗೂ ಶಿಲ್ಪದ ಯೋಗ ಒರಟ ಆದನು ಕವಿ ಈಗ ಕೋಗಿಲೆಯಂತೆ ಉಲಿದಿದೆ ರಾಗ ಕವಿರತ್ನನೆನಿಸಿದವನ ಲೇಖನಿಯಲೀಗ ನನ್ನೆಲ್ಲಾ ಏಳಿಗೆಗೆ ನೀನೆ ಸ್ಪೂರ್ತಿ ನಿನ್ನಿಂದಲೇ ನನಗೊಲಿಯಿತು ಕೀರ್ತಿ ಈಗ ನೀ ಬೆರಳ ತೋರಿದರೆ ಮಾಡುವೆ ಆ ಮಾಯಾಮೃಗವ ಸೆರೆ ಏನೂ ಇಲ್ಲದವನಲ್ಲೂ ಸಾಧಿಸುವ ಛಲ ತುಂಬಿದೆ ನನ್ನನ್ನಿಷ್ಟೆತ್ತರಕೇರಿಸಿದ ನಿನ್ನ ವಿಶ್ವಾಸಕೆ ಎದೆ ತುಂಬಿ ಬಂದಿದೆ ನನ್ನ ನಾಲಗೆಯ ಮೇಲೆ ನೀ ಬರೆದೆ ಸ್ವರ್ಣಾಕ್ಷರ ಇಂದು ಅದಾಗಿದೆ ನಿನ್ನೆದುರು ಕವಿತ್ವದ ಹೆಮ್ಮರ ನೀ ನನ್ನ ಪಾಲಿನ ಸರಸ್ವತಿ ಒಲವಿಂದ ರೂಢಿಸಿದೆ ಸಂಸ್ಕೃತಿ ನಾನಿನ್ನ ದಾಸ,ಈ ಎದೆಯೇ ನಿವಾಸ ನೀನೇ ನನ್ನ ಶ್ವಾಸ. 1034ಪಿಎಂ130615 ಅಪ್ಪಾಜಿ ಎ ಮುಸ್ಟೂರು ಸುಧಾ #ಅಮುಭಾವದೂಟ 63 ನಿನ್ನೆದೆಗೊರಗಿ ನನ್ನ ಮನ ಕರಗಿ ಭಾವವಾಯ್ತೊಂದು ಕವಿತೆ ಅದು ಎಂದೂ ಬತ್ತದ ಒರತೆ ಕಾರ್ಗಲ್ಲಿಗೂ ಶಿಲ್ಪದ ಯೋಗ