💐ರಕ್ತ ದಾನಿ💐 👇 Capital ಓದಿ #ರಕ್ತದಾನಿ ಕರಬಸಪ್ಪಗೊಂದಿ# ಇವರು ಕರಬಸಪ್ಪ ಗೊಂದಿ ಅಂತ ಇವರ್ನ ಇಡೀ ಹಾವೇರಿ ಜಿಲ್ಲೆ ತುಂಬ ರಕ್ತದಾನಿ ಅಂತ ಕರಿತಾರ.ಇವರು ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನವರು. ವೃತಿಯಲ್ಲಿ ಪೋಲಿಸಪೇದೆ ಮೊನ್ನೆ ಮೊನೆ Tv9 ಕನ್ನಡ ನವರು ಕೊಡುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದರು. ಇವರು ರಕ್ತದಾನದ ಬಗ್ಗೆ ಹಲವಾರು ಕಾರ್ಯಗಳನ್ನು ಜಾಥಾಗಳನ್ನು ಮಾಡಿ ರಕ್ತ ದಾನದ ಬಗ್ಗೆ ಅರಿವು ಮೂಡಿಸಿ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ. ರಕ್ತದಾನ ಅಷ್ಟೇ ಅಲ್ಲದೆ ಜೀವದಾನ ನೇತ್ರ ದಾನ ಮುಂತಾದ ಹಲವಾರು ಸಮಾಜ ಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಎಲೆಮರೆಯ ಕಾಯಿಯಂತೆ ಕೆಲಸದ ಒತ್ತಡದ ನಡುವೆಯೂ ಸಮಾಜ ಸೇವೆ ಮಾಡುತ್ತಿದ್ದಾರೆ.