#ಮರೆತು #ಮುಂದೆ #ಸಾಗಿದೆ* ಗುರುತಿಲ್ಲದವರು ನಾವು ಗುರುತಾಗಿ ನಿಂತವರು ಮುಂಜಾನೆಯ ಹೊಂಬಿಸಿಲಿಗೆ ಹೊಳೆಯುತಲೆ ಕರಗಿಹೋದೆವು ದಳ ಬಿರಿದು ಚೆಲುವ ತೆರೆದು ಸಂಜೆಗೆ ಬಾಡುವ ಹೂ ನಾವು ಹಗಲೆಲ್ಲ ಉರಿದರೂ ನಾನು ಇರುಳು ಬಂದಾಗ ತೆರಳಲೇಬೇಕು ಸೂರ್ಯ ಮರೆಯಾದಾಗ ರಾತ್ರಿ ಪೂರ ಬೆಳದಿಂಗಳ ನಾ ಚೆಲ್ಲಬೇಕು ಇಳೆಯ ತಣಿಸಲು ಮಳೆಯಾಗಿ ಸುರಿಯಲು ನಾವು ಕರಗಲೇಬೇಕು ಕೆರೆ ತೊರೆ ಹಳ್ಳ ನದಿಯಾಗಿ ಹರಿದು ಕೊನೆಗೊಮ್ಮೆ ಸಾಗರದಿ ಲೀನವಾಗಬೇಕು ಕಾಯಿ ಹಣ್ಣಾಗಿ ಬೀಜ ಮರವಾಗಿ ತಿರುಗುತಿದೆ ಬದುಕು ಬರಡಾಗದಂತೆ ಬೆಟ್ಟ ಗುಡ್ಡ ಬಯಲು ಕಣಿವೆ ಬದಲಾವಣೆಗೆ ಒಗ್ಗಿಕೊಂಡವೆ ಇರದೆ ಚಿಂತೆ ತೃಣ ಮಾನವ ಹೆಣವಾಗವ ನೀನು ಗುರತಿಗಾಗಿ ಗಾಯ ಮಾಡಿ ಸುಖಿಸುವೆ ಕೊನೆಗೆ ಈ ಜಗವು ನಿನ್ನ ಮರೆತು ಮುಂದೆ ಸಾಗುತಿದೆ 1223ಪಿಎಂ16102017 #ಅಮುಭಾವಬುತ್ತಿ ೧೩೨ #ಮರೆತು #ಮುಂದೆ #ಸಾಗಿದೆ* ಗುರುತಿಲ್ಲದವರು ನಾವು ಗುರುತಾಗಿ ನಿಂತವರು ಮುಂಜಾನೆಯ ಹೊಂಬಿಸಿಲಿಗೆ