ಮಗನ ಚಿತೆಗೆ ಬೆಂಕಿಯನಿಟ್ಟವ ಹಿಂದುವಲ್ಲ, ಮಗಳ ಗೋರಿಯೊಳಗೆ ಮಲಗಿಸಿದವ ಮುಸ್ಲಿಮನಲ್ಲ, ದುಃಖದಲ್ಲಿ ಅಳುತ್ತಿರುವರೆಲ್ಲರೂ ಮನುಷ್ಯರೆ. ಶೂನ್ಯದೆಡೆಗೆ ನೋಡುತಿಹರು ನಿರ್ಲಿಪ್ತರಾಗಿ. ಹೆಣವ ಸುಟ್ಟ ಚಿತೆಯ ಬಣ್ಣ ಕೇಸರಿ, ಗೋರಿ ಹೊದ್ದ ಚಾದರದ ಬಣ್ಣ ಹಸಿರು, ಸ್ಮಶಾನದಿಂದ ಎಲ್ಲ ಆದ ಮೇಲೆ ಉಳಿದದ್ದೇನು? ಕಪ್ಪು ಬಣ್ಣದ ಬೂದಿ, ಕಂದು ಬಣ್ಣದ ಮಣ್ಣು. ಕೇಸರಿಯೂ ಇರಲಿಲ್ಲ, ಹಸಿರಂತೂ ಕಾಣಲಿಲ್ಲ. Inspired by the words written by Danni Thomas #humanity