Nojoto: Largest Storytelling Platform

ಆದಿಯಿಂದ ಇಲ್ಲಿವರೆಗೂ ಬರೆದು ಸೋತ ಕವಿಯು ಕವನ ಪರಿಧಿ ಮೀರಿ

ಆದಿಯಿಂದ ಇಲ್ಲಿವರೆಗೂ ಬರೆದು ಸೋತ ಕವಿಯು 
ಕವನ ಪರಿಧಿ ಮೀರಿ ಉಳಿದ ಕಾವ್ಯವೊಂದು ಹೆಣ್ಣು.

ಧರೆಯು ಗಂಗೆ ತುಂಗೆ ಪಾವನಳೆ ಹೆಣ್ಣು 
ವನವು ಧನವು ಸಿರಿಯಾದವಳೆ ಹೆಣ್ಣು 
ಮಾತು ಮೌನ ಸಂಗೀತವಾದವಳೆ ಹೆಣ್ಣು 
ಅಕ್ಕರೆಯ ಸಕ್ಕರೆಯ ಅನ್ನಪೂರ್ಣೆ ಹೆಣ್ಣು 

ತ್ರಿಮೂರ್ತಿಗಳ ತೊಟ್ಟಿಲೊಳಗೆ ತೂಗಿದವಳು 
ತುಟಿಯ ಕಚ್ಚಿ ನೋವು ನುಂಗಿ ಜನ್ಮವಿಡುವುಳು 
ತನ್ನೇ ತಾನು ಮರೆತು ನಮ್ಮ ಹೊಟ್ಟೆಹೊರೆವಳು 
ಋಣವ ತೀರಿಸೆಂದು ಯಾರನೆಂದೂ ಕೇಳಳು 

ಹಣತೆಯಾಗಿ ಉರಿದು ಮನೆಗೆ ಬೆಳಕನಿಡುವಳು 
ಕಳೆತ ಮನದ ಕೊಳೆಯನ್ನು ತೊಳೆದುಬಿಡುವಳು  
ಹತ್ತಹಲವು ರೂಪದಲ್ಲಿ ನಮ್ಮ ಕಾಯುವಳೂ 
ಈಕವನ ಬರೆವ ಕವಿಯನಂದೆ ಭುವಿಗೆ ತಂದಳು #csmayachari #poetry #kannadapoem #womensday #ಮಹಿಳಾದಿನಾಚರಣೆ #ಕನ್ನಡಕವಿತೆ #yqquotes #yqquotesbaba
ಆದಿಯಿಂದ ಇಲ್ಲಿವರೆಗೂ ಬರೆದು ಸೋತ ಕವಿಯು 
ಕವನ ಪರಿಧಿ ಮೀರಿ ಉಳಿದ ಕಾವ್ಯವೊಂದು ಹೆಣ್ಣು.

ಧರೆಯು ಗಂಗೆ ತುಂಗೆ ಪಾವನಳೆ ಹೆಣ್ಣು 
ವನವು ಧನವು ಸಿರಿಯಾದವಳೆ ಹೆಣ್ಣು 
ಮಾತು ಮೌನ ಸಂಗೀತವಾದವಳೆ ಹೆಣ್ಣು 
ಅಕ್ಕರೆಯ ಸಕ್ಕರೆಯ ಅನ್ನಪೂರ್ಣೆ ಹೆಣ್ಣು 

ತ್ರಿಮೂರ್ತಿಗಳ ತೊಟ್ಟಿಲೊಳಗೆ ತೂಗಿದವಳು 
ತುಟಿಯ ಕಚ್ಚಿ ನೋವು ನುಂಗಿ ಜನ್ಮವಿಡುವುಳು 
ತನ್ನೇ ತಾನು ಮರೆತು ನಮ್ಮ ಹೊಟ್ಟೆಹೊರೆವಳು 
ಋಣವ ತೀರಿಸೆಂದು ಯಾರನೆಂದೂ ಕೇಳಳು 

ಹಣತೆಯಾಗಿ ಉರಿದು ಮನೆಗೆ ಬೆಳಕನಿಡುವಳು 
ಕಳೆತ ಮನದ ಕೊಳೆಯನ್ನು ತೊಳೆದುಬಿಡುವಳು  
ಹತ್ತಹಲವು ರೂಪದಲ್ಲಿ ನಮ್ಮ ಕಾಯುವಳೂ 
ಈಕವನ ಬರೆವ ಕವಿಯನಂದೆ ಭುವಿಗೆ ತಂದಳು #csmayachari #poetry #kannadapoem #womensday #ಮಹಿಳಾದಿನಾಚರಣೆ #ಕನ್ನಡಕವಿತೆ #yqquotes #yqquotesbaba