Nojoto: Largest Storytelling Platform
sathya7859222568642
  • 1.2KStories
  • 9Followers
  • 26Love
    1.9KViews

Sathya Sathish J G

  • Popular
  • Latest
  • Video
c10fd285776c6a063d786b2a09c4170e

Sathya Sathish J G

ಹಲವು ಜಾತಿಯ ಕಟ್ಟಿಗೆಯನ್ನು ತಂದು ಸುಟ್ಟಲ್ಲಿ
ಅಗ್ನಿಯೊಂದಲ್ಲದೆ,
ಅಲ್ಲಿ ಕಟ್ಟಿಗೆಗಳ ಕುರುಹು ಕಾಣುವುದೇ..?

ಯರೇಷ್ಟೇ ಬುದ್ಧಿ ಮಾತು ಹೇಳಿದರು, ಬೈದರು,
ಮನಸ್ಸು ಒಂದಿಷ್ಟು ಬದಲಾಗಬಹುದಷ್ಟೇ
ಆದರೆ..!
ಅಂತರಾಳದಲ್ಲಿ ಬೇರೂರಿರುವ ನೆನಪುಗಳಿಗೆ 
ಮಂಜು ಕವಿದು ಮಬ್ಬು ಆವರಿಸುವುದಿಲ್ಲ.
ಸೂರ್ಯ-ಚಂದ್ರರಂತೆ ಪ್ರಕಾಶಿಸುತ್ತಲೆ ಇರುತ್ತವೆ....👆 ಅಂತರಾತ್ಮದ ಅಧಿಪತಿ ಪರಮಾತ್ಮನೇ ಹೊರತು ನಾವಲ್ಲ
ಅವನಿಚ್ಚೆ ಇಲ್ಲದೆ ಬದಲಾವಣೆ ಸಾದ್ಯವೇ...?
ಸಾದ್ಯವಿಲ್ಲ..👆
#ಸತ್ಯಸತೀಶ್

ಅಂತರಾತ್ಮದ ಅಧಿಪತಿ ಪರಮಾತ್ಮನೇ ಹೊರತು ನಾವಲ್ಲ ಅವನಿಚ್ಚೆ ಇಲ್ಲದೆ ಬದಲಾವಣೆ ಸಾದ್ಯವೇ...? ಸಾದ್ಯವಿಲ್ಲ..👆 #ಸತ್ಯಸತೀಶ್

c10fd285776c6a063d786b2a09c4170e

Sathya Sathish J G

......... ಭಾವನೆಗಳಿಲ್ಲದ ಮನದ ಮಾತುಗಳಿವು
ಇದೆಂದು ಶುಭಾಶಯ ಆಗುವುದಿಲ್ಲ
ಇದರಲ್ಲಿ ನನ್ನ ತಪ್ಪೇನು ಇಲ್ಲ ನನ್ನೊಲವೇ...👩‍⚕️

ಆದರೂ ಶುಭಾಶಯ ಹೇಳದಿರುವುದು ನನ್ನದೇ ತಪ್ಪು ಎಂದಾದರೆ
ನನ್ನೆಯಾ ನೆನಪು ನಿಮಗಿದ್ದರೆ ಮನ್ನಿಸಿಬಡಿ ನನ್ನ...🙏😔🙏

ಸೂರ್ಯ ಬೆಳಗುವುದನ್ನೆ ಮರೆತರೂ

ಭಾವನೆಗಳಿಲ್ಲದ ಮನದ ಮಾತುಗಳಿವು ಇದೆಂದು ಶುಭಾಶಯ ಆಗುವುದಿಲ್ಲ ಇದರಲ್ಲಿ ನನ್ನ ತಪ್ಪೇನು ಇಲ್ಲ ನನ್ನೊಲವೇ...👩‍⚕️ ಆದರೂ ಶುಭಾಶಯ ಹೇಳದಿರುವುದು ನನ್ನದೇ ತಪ್ಪು ಎಂದಾದರೆ ನನ್ನೆಯಾ ನೆನಪು ನಿಮಗಿದ್ದರೆ ಮನ್ನಿಸಿಬಡಿ ನನ್ನ...🙏😔🙏 ಸೂರ್ಯ ಬೆಳಗುವುದನ್ನೆ ಮರೆತರೂ

c10fd285776c6a063d786b2a09c4170e

Sathya Sathish J G

!! ಬರಹ !!

ಬರಹ ಎಂದರೆ...
ಕೇವಲ ಅಕ್ಷರದೊಳಗಿನ ಮೋಹವಲ್ಲ.
ಮನೋರಂಜನೇಯ ಪಾಠವಲ್ಲ.
ಮಾತಿನನೊಳಗಿನ ಮರ್ಮವಲ್ಲ.
ಯಾರನ್ನು ದೂರುವ ಅಸ್ತ್ರವಲ್ಲ.
ಅದೊಂದು ಮನದ ಭಾವನೆಗಳೊಳಗಿನ ಕನ್ನಡಿ.

ಕವನವೆಂದ್ದರೆ  ಒಂದು ದೊಡ್ಡ ಕಥೆಯನ್ನ 
ನಾಲ್ಕೈದು ಸಾಲುಗಳಲ್ಲಿ ಚಿಕ್ಕದಾಗಿ ಬಿಂಬಿಸುವ ಯತ್ನ.
ಪದಗಳ ಜೋಡಣೆಯ ಕ್ರಮ ಕಾವ್ಯ ಕವನದ ಅಂದ್ದವನ್ನು
ಹೆಚ್ಚಿಸಿ ವಾಸ್ತವವನ್ನು ಜೀವಂತವಾಗಿಡಲು ಯತ್ನಿಸುತ್ತದೆ...!

👇 ಕೊನೆಯದಾಗಿ ಅಡಿಬರಹವನ್ನು ಓದಿ.👇 ಇಷ್ಟೆಲ್ಲಾ ನಾ ಹೇಳುತ್ತಿರುವುದಕ್ಕೆ ಕಾರಣಗಳಿವೆ
YQ ಬಳಗದ ಯಾರಿಗೂ ನಾ ಹೇಳುತ್ತಿಲ್ಲ..👆

ಬರಹದ ಭಾವವನ್ನು ಅರಿಯದ ನನ್ನೊಲವಿಗೆ ಹೇಳುತ್ತಿರುವೇ..ಅಷ್ಟೇ..
ಅವರಿಗೆ ತಿಳಿಸಲು ನನ್ನಲ್ಲಿ ಬೇರೆ ಯಾವ ಮಾರ್ಗವು ಉಳಿದಿಲ್ಲ 
ಇರುವುದೊಂದೇ ಈ ಬರಹ...👆

ಇನ್ನ ಬರಹವೆಂದರೆ ಓದುವವರ ಭಾವಕ್ಕೆ ತಕ್ಕಂತೆ ಬರಹದ ಭಾವವು ಬದಲಾಗುತ್ತದೆ.

ಇಷ್ಟೆಲ್ಲಾ ನಾ ಹೇಳುತ್ತಿರುವುದಕ್ಕೆ ಕಾರಣಗಳಿವೆ YQ ಬಳಗದ ಯಾರಿಗೂ ನಾ ಹೇಳುತ್ತಿಲ್ಲ..👆 ಬರಹದ ಭಾವವನ್ನು ಅರಿಯದ ನನ್ನೊಲವಿಗೆ ಹೇಳುತ್ತಿರುವೇ..ಅಷ್ಟೇ.. ಅವರಿಗೆ ತಿಳಿಸಲು ನನ್ನಲ್ಲಿ ಬೇರೆ ಯಾವ ಮಾರ್ಗವು ಉಳಿದಿಲ್ಲ ಇರುವುದೊಂದೇ ಈ ಬರಹ...👆 ಇನ್ನ ಬರಹವೆಂದರೆ ಓದುವವರ ಭಾವಕ್ಕೆ ತಕ್ಕಂತೆ ಬರಹದ ಭಾವವು ಬದಲಾಗುತ್ತದೆ.

c10fd285776c6a063d786b2a09c4170e

Sathya Sathish J G

!! ನಿರಾಸೆ !!

ನಿನ್ ಜೊತೆಗಿರ್ಬೇಕು ಅನ್ನೋದೇ ನನ್ನಾಸೆ 
ನನ್ ಬೇಡ ಅನ್ನೋದೇ ನಿನ್ನಸೇ


ಇಲ್ಲಿ ನನ್ನಸೆಯೇ ನಿರಾಸೆ..🗿 ಮರೆಯಲಾಗದಷ್ಟು ಮನವ ತುಂಬಿದವಳೆ
ಪುರಾವೆಗಳೇ ಇಲ್ಲದೆ ಮರೆಯಾದೆ ಏಕೆ....?
#ಸತ್ಯಸತೀಶ್

ಮರೆಯಲಾಗದಷ್ಟು ಮನವ ತುಂಬಿದವಳೆ ಪುರಾವೆಗಳೇ ಇಲ್ಲದೆ ಮರೆಯಾದೆ ಏಕೆ....? #ಸತ್ಯಸತೀಶ್

c10fd285776c6a063d786b2a09c4170e

Sathya Sathish J G

!! ಪದಗಳು !!

ಮನಸ್ಸಿನಲ್ಲಿ ಅದೇಷ್ಠೋ
ಪದಗಳು ಒಂಟ್ ಒಂಟಿಯಾಗಿವೇ,

ಒಂದರ ಜೊತೆ ಒಂದು ಪೋಣಿಸಲು
ಇನ್ನೊಂದು ಮನಸ್ಸು ಬೇಕಾಕಿದೆ..

ಪದಗಳ ಜೋಡಿಸಲು ಮಾತ್ರ
ಭಾವನೆಗಳ ಜೊತೆ ಆಟವಾಡಲು ಅಲ್ಲ...!

ಪದಗಳ ಪೋಣಿಸಿ ಕೂಡಿ ಹಾಡಿದರೆ
ಅದು ಒಲವಿನ ಹಾಡಗುತ್ತದೆ
ಆ ಹಾಡಿನಲ್ಲಿ ಮನಸ್ಸಿನ ಭಾವ ತುಂಬುತ್ತದೆ...* ಬರೆಯಲು ಬಂದೆ ನಾ ಕನವರಿಕೆಯ ನೀರವ ಪುಟಗಳಲ್ಲಿ
ಕರಗಿದವು ಪದಗಳು ಕಣ್ಣಂಚಿನ ಹನಿಗಳಿಂದಲೇ...😊
#ಸತ್ಯಸತೀಶ್

ಬರೆಯಲು ಬಂದೆ ನಾ ಕನವರಿಕೆಯ ನೀರವ ಪುಟಗಳಲ್ಲಿ ಕರಗಿದವು ಪದಗಳು ಕಣ್ಣಂಚಿನ ಹನಿಗಳಿಂದಲೇ...😊 #ಸತ್ಯಸತೀಶ್

c10fd285776c6a063d786b2a09c4170e

Sathya Sathish J G

................. ನನ್ನ ಬದುಕಲ್ಲಿ ನನ್ನೋಲವು ಮರಳಿ ಬರದಿದ್ದರೂ
ಮರಳಿ ಬಂದಿದೆ ಜುಲೈ 12...👩‍⚕️ 
ಪರಿಚಯದ ದಿನ..
ನಾ ಹುಟ್ಟಿದ ದಿನ ನನಗೆ ನೆನಪು ಇರಿತೋ ಇಲ್ಲವೋ ತಿಳಿದಿಲ್ಲ
ಆದರೆ ಈ ದಿನವ ನಾ ಮರೆಯಲಾರೆ.
ಇಂತಹ ಕೆಲವೊಂದು ನೆನಪುಗಳೊಂದಿಗೆ ಏಕಾಂಗಿಯಾಗಿರುವೇ

ನಿನ್ನನ್ನು ವರ್ಣಿಸಿ ಬರೆದ ಬರಹಗಳು ಎಷ್ಟೋ ನಾಕಾಣೆ...!

ನನ್ನ ಬದುಕಲ್ಲಿ ನನ್ನೋಲವು ಮರಳಿ ಬರದಿದ್ದರೂ ಮರಳಿ ಬಂದಿದೆ ಜುಲೈ 12...👩‍⚕️ ಪರಿಚಯದ ದಿನ.. ನಾ ಹುಟ್ಟಿದ ದಿನ ನನಗೆ ನೆನಪು ಇರಿತೋ ಇಲ್ಲವೋ ತಿಳಿದಿಲ್ಲ ಆದರೆ ಈ ದಿನವ ನಾ ಮರೆಯಲಾರೆ. ಇಂತಹ ಕೆಲವೊಂದು ನೆನಪುಗಳೊಂದಿಗೆ ಏಕಾಂಗಿಯಾಗಿರುವೇ ನಿನ್ನನ್ನು ವರ್ಣಿಸಿ ಬರೆದ ಬರಹಗಳು ಎಷ್ಟೋ ನಾಕಾಣೆ...!

c10fd285776c6a063d786b2a09c4170e

Sathya Sathish J G

............. ಕಡಲಾಳದಲ್ಲಿ ಅಡಗಿರುವ ಮುತ್ತು ನೀನು
ಸೇರಲೆತ್ನಿಸದೆ ನೋಡಿ ಮನತುಂಬಬೇಕು ಅಷ್ಟೇ..
ಯೋಗ್ಯತೆ ಮೀರಿದ ಜೊತೆಗಿರುವ ಕನಸ ಬಿಟ್ಟಿ
ದೂರದಲ್ಲೇ ನಿಂತು ಖುಷಿಪಡಬೇಕು ಅಷ್ಟೇ...🤗

ಬದುಕೆಂಬ ಈ ಜೀವನದ ಪುಸ್ತಕದಲ್ಲಿ...!
ಕೆಲವು ಪುಟಗಳು ಪ್ರೀತಿಯಲ್ಲಿ.
ಇನ್ನು ಕೆಲ ಪುಟಗಳು ನೋವಿನಲ್ಲಿ...🗿

ಕಡಲಾಳದಲ್ಲಿ ಅಡಗಿರುವ ಮುತ್ತು ನೀನು ಸೇರಲೆತ್ನಿಸದೆ ನೋಡಿ ಮನತುಂಬಬೇಕು ಅಷ್ಟೇ.. ಯೋಗ್ಯತೆ ಮೀರಿದ ಜೊತೆಗಿರುವ ಕನಸ ಬಿಟ್ಟಿ ದೂರದಲ್ಲೇ ನಿಂತು ಖುಷಿಪಡಬೇಕು ಅಷ್ಟೇ...🤗 ಬದುಕೆಂಬ ಈ ಜೀವನದ ಪುಸ್ತಕದಲ್ಲಿ...! ಕೆಲವು ಪುಟಗಳು ಪ್ರೀತಿಯಲ್ಲಿ. ಇನ್ನು ಕೆಲ ಪುಟಗಳು ನೋವಿನಲ್ಲಿ...🗿

c10fd285776c6a063d786b2a09c4170e

Sathya Sathish J G

!! ಸಾವು !!

ನೆಮ್ಮದಿ ಇಲ್ಲದ ಬದುಕಿಗಿಂತ
ಸಮಾಧಾನದ ಸಾವೇ ಮೇಲೂ ಎನಿಸುವುದು ಸಹಜ.
ನಾನೇಕೆ ಸಾವಿನ ಕನಸನ್ನು ಇಷ್ಟ ಪಡುತೆನೋ ಗೊತ್ತಿಲ್ಲ.
ಆದರೆ
ಜೀವನದಲ್ಲಿ ಎಲ್ಲವನ್ನೂ ಕೆದಕುವ ನೆನಪುಗಳಿಗೆ
ವಿರಾಮ ಕೊಡುವಂತೆ ಒಂದು ಸಾವು ಬೇಕಲ್ಲವೇ...?

ಬಹುದೂರದಲ್ಲಿ ನಿಂತು ಕೈಬೀಸಿ ಕರೆಯುತ್ತಿದೆ
ಮಸಣದಲ್ಲಿನ ಆ ನನ್ನ ಚಿತೆ..
ಸತ್ತಾಗ ಎಲ್ಲರಿಗೂ ನಾ ದೇವರಂತೆ ಕಾಣುವೆನೇನೋ ಅದಕ್ಕೆ
ಅವರೆಲ್ಲ ನನ್ನನ್ನು ಬಣ್ಣ ಬಣ್ಣದ ಹೂಗಳಿಂದ ಶೃಂಗರಿಸುವರಂತೆ..😂🤣

👇...Read Caption...👇 ನೋಡುವಾಸೆ ನನ್ನವರೆಲ್ಲ ನನ್ನನ್ನು ನೆನೆಯುವ ಬಗೆಯ
ತಂಗಾಳಿಯಲ್ಲಿ ತೇಲುತ ನಿಂತು....👻

ನಾವು ಬದುಕಿದ್ದಾಗ ಭಾವನೆಗಳಿಗೆ,
ಅಥವಾ ಯಶಸ್ಸಿಗೆ ಬೆಲೆ ಕೊಡದೆ ಇದ್ದವರೆಲ್ಲ
ಜೀವಂತ ಭಾವನೆಗಳ ಜೊತೆ ಸತ್ತಾಗ
ಮೂರಿಡಿ ಮಣ್ಣಕಿ ಹಿಂತಿರುಗಿಯು ನೋಡದೆ ಮರೆತು ನಡೆಯುವರು
ನಾ ಯಾರೆಂದು ತಿಳಿದವರು, ಅವರೆಲ್ಲ ನನ್ನವರೇ...🙏

ನೋಡುವಾಸೆ ನನ್ನವರೆಲ್ಲ ನನ್ನನ್ನು ನೆನೆಯುವ ಬಗೆಯ ತಂಗಾಳಿಯಲ್ಲಿ ತೇಲುತ ನಿಂತು....👻 ನಾವು ಬದುಕಿದ್ದಾಗ ಭಾವನೆಗಳಿಗೆ, ಅಥವಾ ಯಶಸ್ಸಿಗೆ ಬೆಲೆ ಕೊಡದೆ ಇದ್ದವರೆಲ್ಲ ಜೀವಂತ ಭಾವನೆಗಳ ಜೊತೆ ಸತ್ತಾಗ ಮೂರಿಡಿ ಮಣ್ಣಕಿ ಹಿಂತಿರುಗಿಯು ನೋಡದೆ ಮರೆತು ನಡೆಯುವರು ನಾ ಯಾರೆಂದು ತಿಳಿದವರು, ಅವರೆಲ್ಲ ನನ್ನವರೇ...🙏

c10fd285776c6a063d786b2a09c4170e

Sathya Sathish J G

!!  ನಿದ್ದೆ  !!

ಈ ಕಣ್ಣುಗಳೊಮ್ಮೆ ನೋಡು ಕೆಂಡ ಕಾರುತ್ತಿವೆ
ಎಲ್ಲವು ಇದ್ದೂ ಏನೂ ಇಲ್ಲದಂತಾಗಿವೆ.
ನೀ ಬರದಿದ್ದಾಗ ಅದೆಷ್ಟೋ ಆಲೋಚನೆಗಳ
ಸುಳಿಯಲ್ಲಿ ಸಿಲುಕಿ ಚಿಂತೆಯ ಚಿತೆಯಲ್ಲಿ
ಕೊರಗುತಿಹ ಈ ಮನಸನ್ನು ಒಮ್ಮೆ ನೋಡು..!


ಬಾ ಬೇಗ ಬಾ ನೀ ಬಂದು ನಾಲ್ಕೈದು
ಗಂಟೆಯಾದರೂ ಜೊತೆಯಾಗು,
ನೀ ಬರಲು ಎಲ್ಲವೂ ಮೌನ
ಬಂದು ಆವರಿಸಿದೆ ಎಂದರೆ ನಿನ್ನೆದುರು ಮತೆಲ್ಲವು ಶೂನ್ಯ ಅಲ್ಲವೇ..! ಅತಿಯಾಗಿ ನಿದ್ದೆ ಮಾಡಿ ಸಾಧನೆಯನ್ನು ಮರೆತವರು ಎಷ್ಟೋ ಜನ.
ನಿದ್ದೆಯೇ ಬಾರದೆ ತುಸು ನಿದ್ದೆ ಮಾಡಿ ಆರೋಗ್ಯ ಕೆಡಿಸಿಕೊಂಡವರು ಇನ್ನೋಷ್ಟು ಜನ.

ಸರಿಯಾಗಿ ನಿದ್ದೆ ಮಾಡಲಿಲ್ಲ ಅಂದರೆ...!
ಮೆದುಳಿಗೆ ಮತ್ತು ಹೃದಯಕ್ಕೆ ಅಪಾಯ ಅಂತೆ.
ಇಲ್ಲದ ಸಲ್ಲದ ವಿಷಯಗಳೆಲ್ಲ ಮನಸ್ಸಿನ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿ
ಬಡ್ಡಿ ಮಗಂದು ನಿದ್ದೆ ನನಗೆ ಬರೋದೇ ಇಲ್ಲ, ಈಗ ನಾ ಎನ್ ಮಾಡ್ಲಿ....,?
#ಸತ್ಯಸತೀಶ್

ಅತಿಯಾಗಿ ನಿದ್ದೆ ಮಾಡಿ ಸಾಧನೆಯನ್ನು ಮರೆತವರು ಎಷ್ಟೋ ಜನ. ನಿದ್ದೆಯೇ ಬಾರದೆ ತುಸು ನಿದ್ದೆ ಮಾಡಿ ಆರೋಗ್ಯ ಕೆಡಿಸಿಕೊಂಡವರು ಇನ್ನೋಷ್ಟು ಜನ. ಸರಿಯಾಗಿ ನಿದ್ದೆ ಮಾಡಲಿಲ್ಲ ಅಂದರೆ...! ಮೆದುಳಿಗೆ ಮತ್ತು ಹೃದಯಕ್ಕೆ ಅಪಾಯ ಅಂತೆ. ಇಲ್ಲದ ಸಲ್ಲದ ವಿಷಯಗಳೆಲ್ಲ ಮನಸ್ಸಿನ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿ ಬಡ್ಡಿ ಮಗಂದು ನಿದ್ದೆ ನನಗೆ ಬರೋದೇ ಇಲ್ಲ, ಈಗ ನಾ ಎನ್ ಮಾಡ್ಲಿ....,? #ಸತ್ಯಸತೀಶ್

c10fd285776c6a063d786b2a09c4170e

Sathya Sathish J G

!! ಕಣ್ಣೀರು !! 

ನೆನಪುಗಳ ನೋವು ಪಾಳು ಮನೆಯಲ್ಲಿ
ನೇತಾಡುತ್ತಿವೆ ಬಾವುಲಿಗಳಂತೆ..
ಕಣ್ಣಂಚಿನಲ್ಲಿ ಕೊಲೆಯಾಗುತ್ತಿರುವ ಕಣ್ಣೀರು
ಕನವರಿಸುತ್ತಿದೆ ನಿನ್ನನ್ನು ಹಗಲು - ಇರುಳು..

ಜೀವನದಲ್ಲಿ ಸೋತು-ಗೆದ್ದಾಗಲೂ ಕಣ್ಣೀರು
ಆತ್ಮೀಯರ ಅಗಲುವಿಕೆಗೂ ಕಣ್ಣೀರು
ನನಗ್ಯಾಕೋ ಅವರ ನೆನಪಿಲ್ಲದ ಗಳಿಗೆಯೇ ಇಲ್ಲ
ಅವರಿಗೆ ನನ್ನೆಯ ನೆನಪೇ ಇಲ್ಲ
ಆದರೂ ನನಗ್ಯಾಕೋ ದೈವ ಈ ನೆನಪುಗಳ ಕಣ್ಣೀರು..?
ನೊಂದ ಮನಸ್ಸಿನ ಕಣ್ಣೀರಿದು, ನಾಟಕೀಯವಲ್ಲ
ಕಣ್ಣಿರಿಗು ಮಾತು ಕಲಿಸಬೇಕಾಗಿದೆ ಮನಸ್ಸಿಗೆ ಸಾಂತ್ವನ ಹೇಳಲು..🗿 ನಡುರಾತ್ರಿಯಲ್ಲಿ ನಿದ್ದೆ ಮರೆತು ಎದ್ದು ಕುಳಿತು
ನಗುವುದೋ ಅಳುವುದೋ ಒಂದು ತಿಳಿಯದಾಗಿದೆ..
ಮನಮೆಚ್ಚಿದ ಕಣ್ಣುಗಳಲ್ಲಿ ಎಂದು ಕಣ್ಣೀರು ಬಾರದಿರಲಿ
ಬೇಕಾದರೆ ನನ್ ಈ ಜೀವನದಲ್ಲಿ ಕಣ್ಣೀರು ಎಂದು ಬತ್ತದಿರಲಿ ದೇವ....!
#ಸತ್ಯಸತೀಶ್ 

Poke ಮಾಡಿದ ನೆಚ್ಚಿನ ಬರಹಗಾರರಿಗೆ ಧನ್ಯವಾದಗಳು...🙏

ನಡುರಾತ್ರಿಯಲ್ಲಿ ನಿದ್ದೆ ಮರೆತು ಎದ್ದು ಕುಳಿತು ನಗುವುದೋ ಅಳುವುದೋ ಒಂದು ತಿಳಿಯದಾಗಿದೆ.. ಮನಮೆಚ್ಚಿದ ಕಣ್ಣುಗಳಲ್ಲಿ ಎಂದು ಕಣ್ಣೀರು ಬಾರದಿರಲಿ ಬೇಕಾದರೆ ನನ್ ಈ ಜೀವನದಲ್ಲಿ ಕಣ್ಣೀರು ಎಂದು ಬತ್ತದಿರಲಿ ದೇವ....! #ಸತ್ಯಸತೀಶ್ Poke ಮಾಡಿದ ನೆಚ್ಚಿನ ಬರಹಗಾರರಿಗೆ ಧನ್ಯವಾದಗಳು...🙏

loader
Home
Explore
Events
Notification
Profile