Nojoto: Largest Storytelling Platform

Best kvprakashquotes Shayari, Status, Quotes, Stories

Find the Best kvprakashquotes Shayari, Status, Quotes from top creators only on Nojoto App. Also find trending photos & videos about kvp full form, kvp ramachandra rao, kvp 18100, raka the rebel, rak therm dealers in dubai,

  • 1 Followers
  • 86 Stories

ವಿಜಯ್

ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ. ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐 ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ. ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻 #kvprakashquotes #ವಿಜಯ್_ಗಝಲ್ #ಕನ್ನಡ_ಗಝಲ್

read more
ಗಝಲ್
ಅಕ್ಕರೆಯಿಂದ ಅಡಿಯಿರಿಸಿದ್ದ ಅಕ್ಷರದ ಮಹಲು ಕುಸಿಯುತ್ತಿದೆ
ಭಾವನೆಗಳಿಗೆ ಬಣ್ಣಹಚ್ಚಿದ ಬರಹದ ಹೊನಲು ಬತ್ತಿಹೋಗುತ್ತಿದೆ

ಕಲೆತು ಕಲಿತು ಬಯಸಿ ಬರೆಯುತಲಿದ್ದೆ ಬಹು ದಿನಗಳಿಂದಲೂ
ಪುಟವಿಲ್ಲವೆಂದು ಪ್ರತಿಯೊಂದು ಪದವೂ ಬಲು ಹಠಮಾಡುತ್ತಿದೆ

ಬರೆವ ತುಡಿತಕೆ ಮಿಡಿದ ವೇದಿಕೆ ಉಳಿಸಿ ಹೋಗುತ್ತಿದೆ ವೇದನೆ
ತೆರೆದು ಕದವನು ತೊರೆದು ಹೋಗಿರೆಂದೆನಲು ಮನಕರಗುತ್ತಿದೆ

ಸೇರಿ ಹೋಗುತ್ತಿದೆ ಅರಿವಿನ ಅರಮನೆಯು ನೆನಪಿನ ಪುಟವನ್ನು
ಮನ ಸೂರೆಗೊಳ್ಳುತಿದ್ದ ಬರಹಗಳ ಘಮಲು ಮರೆಯಾಗುತ್ತಿದೆ

ಸಾಗುತ್ತಿರಿ ಕವಿ ಹೃದಯಗಳೆಲ್ಲಾ ಸಾಹಿತ್ಯದ  'ವಿಜಯ' ಪಥದಲ್ಲಿ
ವಿದಾಯ ಗೀತೆಯನು ಬರೆದು ನಡೆದು ಬಿಡಲು ನೋವಾಗುತ್ತಿದೆ ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ.

ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐

ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ.

ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻

ವಿಜಯ್

ತರಹೀ ಗಝಲ್: ನಯನ ಭಟ್ ಜಿ.ಎಸ್❣️ ಅವರ ಊಲಾ ಮಿಸ್ರ #ವಿಜಯ್_ಗಝಲ್ # 11 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes

read more
ತರಹೀ ಗಝಲ್: ನಯನ ಅವರ ಊಲಾ ಮಿಸ್ರ
°°°°°°°°°°°°°°°°°°°°°°°°°°°°°°°°°°°°°°°°°°°
ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ

ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ಲೋಪದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ

ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ

ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ

ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸಿನ ಹೊಯ್ದಾಟದಲ್ಲಿ "ವಿಜಯ"ವನ್ನು ವರ್ಜಿಸುತ್ತಿದ್ದೇನೆ ತರಹೀ ಗಝಲ್: ನಯನ ಭಟ್ ಜಿ.ಎಸ್❣️ ಅವರ ಊಲಾ ಮಿಸ್ರ

#ವಿಜಯ್_ಗಝಲ್ # 11
#ಗಝಲ್
#ಕನ್ನಡ_ಗಝಲ್
#ತರಹೀ_ಗಝಲ್
#kvprakashquotes

ವಿಜಯ್

ತರಹೀ ಗಝಲ್: ನಯನ ಭಟ್ ಜಿ.ಎಸ್❣️ಅವರ ಊಲಾ ಮಿಸ್ರ ನಮ್ಮಿಬ್ಬರಲ್ಲಿ ಇರುವ ಸಾಮ್ಯತೆ ಅಂದ್ರೆ ನನಗೂ ಹೊಸ ಹೊಸ ಪದಗಳನ್ನು ಹುಡುಕಿ ಜೋಡಿಸಬೇಕೆನ್ನುವ ಹುಚ್ಚು. ಅದೇ ಕಾರಣಕ್ಕೆ ನಿಮ್ಮ ಗಝಲ್ ನ ಭಾವವನ್ನು ನನ್ನ ಪ್ರೊಫೈಲ್ ನಲ್ಲಿ ಮುಂದುವರೆಸುವ ಒಂದು ಪುಟ್ಟ ಪ್ರಯತ್ನ ಮಾಡಿರುವೆ. ಪದಗಳ ಗಾಂಭೀರ್ಯ ಕಡಿಮೆಯಾಗಿದ್ದರೆ ಮನ್ನಿಸಿ ಆಯ್ತಾ...😊 #ವಿಜಯ್_ಗಝಲ್ # 10 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes

read more
ತರಹೀ ಗಝಲ್; ನಯನ ಅವರ ಊಲಾ ಮಿಸ್ರ
******************************
ಅಹರ್ನಿಶಿ ನಲುಗುತ್ತಿದೆ ಮುತ್ತಿನಂಥ ಸೊಲ್ಲು ಬದುಕಾಗುತಿದೆ ಮಾಯಾಬಜಾರ್
ಅಹೋರಾತ್ರಿ ಕದಡುತ್ತಿವೆ ಮುಗ್ದಹೃದಯಗಳು ಜಗವಾಗುತಿದೆ ಮಾಯಾಬಜಾರ್

ಮೃಷೆಯ ಮುಖವಾಡಗಳು ಬಿಕರಿಯಾಗುತಿವೆ ಭರ್ಜರಿಯಾಗಿ ರಾಜ ಪಥದಲ್ಲಿ
ಮಡಿದ ಮನುಷ್ಯತ್ವದ ಗೋರಿಯ ಮೇಲೆ ಉದಯವಾಗುತಿದೆ ಮಾಯಾಬಜಾರ್

ಬಯಸಿ ಬಳಲದಿರು ಅನುನಿತ್ಯ ಭವ್ಯ ಭಾವಗಳನ್ನು ಅಸುನೀಗಿದ ಮನಸುಗಳಿಂದ
ನೈತಿಕತೆಯ ಶವಯಾತ್ರೆಯಲಿ ಕುಣಿದಾಡಲು ನಡೆಯಾಗುತಿದೆ ಮಾಯಾಬಜಾರ್

ಕರುಳ ಬಳ್ಳಿಯ ನಂಟನು ಮರೆತು ಹೆತ್ತೊಡಲ ನೋಯಿಸಿ ನಗುವ ನರಾಧಮರು
ಕರುಣೆಯು ಕಣ್ಮರೆಯಾಗಿ ಇಹದೊಳಗೆ ಸಂಬಂಧವಾಗುತಿದೆ ಮಾಯಾಬಜಾರ್

ಕಲುಷಿತಗೊಂಡ ಕನವರಿಕೆಗಳು ಎಡವುತ್ತಾ ಸಾಗುತ್ತಿವೆ 'ವಿಜಯ"ದ ಹಾದಿಯಲ್ಲಿ
ಕಿತ್ತೊಗೆದ ಚಿತ್ತವೃತ್ತಿಯು ಬೆಂಬಿಡದೆ ಕಾಡಿ ಕುಣಿಕೆಯಾಗುತಿದೆ ಮಾಯಾಬಜಾರ್ ತರಹೀ ಗಝಲ್: ನಯನ ಭಟ್ ಜಿ.ಎಸ್❣️ಅವರ ಊಲಾ ಮಿಸ್ರ

ನಮ್ಮಿಬ್ಬರಲ್ಲಿ ಇರುವ ಸಾಮ್ಯತೆ ಅಂದ್ರೆ ನನಗೂ ಹೊಸ ಹೊಸ ಪದಗಳನ್ನು ಹುಡುಕಿ ಜೋಡಿಸಬೇಕೆನ್ನುವ ಹುಚ್ಚು. ಅದೇ ಕಾರಣಕ್ಕೆ ನಿಮ್ಮ ಗಝಲ್ ನ ಭಾವವನ್ನು ನನ್ನ ಪ್ರೊಫೈಲ್ ನಲ್ಲಿ ಮುಂದುವರೆಸುವ ಒಂದು ಪುಟ್ಟ ಪ್ರಯತ್ನ ಮಾಡಿರುವೆ. ಪದಗಳ ಗಾಂಭೀರ್ಯ ಕಡಿಮೆಯಾಗಿದ್ದರೆ ಮನ್ನಿಸಿ ಆಯ್ತಾ...😊

#ವಿಜಯ್_ಗಝಲ್ # 10
#ಗಝಲ್
#ಕನ್ನಡ_ಗಝಲ್
#ತರಹೀ_ಗಝಲ್

ವಿಜಯ್

ಗಝಲ್_ಜುಗಲ್ಬಂದಿ *************** ಇದು ಕೂಡ ತರಹೀ ಗಝಲ್ ನ ಹಾಗೇನೇ. ಆದರೆ ಮೂಲ ಗಝಲ್ ನ "ಮಿಸ್ರ"ವನ್ನು ಇದರಲ್ಲಿ ಬಳಸಲಾಗುವುದಿಲ್ಲ. ಬದಲಿಗೆ ಒಬ್ಬರು ಬರೆದ ಗಝಲ್ ನ ಭಾವವನ್ನು ಅದೇ ಧಾಟಿಯಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದರಲ್ಲಿ ಬರಹಗಾರರು ಒಂದೇ "ರದೀಫ್" ನ್ನು ಬಳಕೆ ಮಾಡಬೇಕು, "ಕಾಫಿಯಾ"ಗಳು ಪುನರಾವರ್ತನೆಯಾಗಬಾರದು ಮತ್ತು "ರವಿ" ಒಂದೇ ಇರಬೇಕು. ಈ ಗಝಲ್ ನ ಇನ್ನೊಂದು ಭಾಗವನ್ನು ನಯನ ಭಟ್ ಜಿ.ಎಸ್❣️ ಅವರ ಪ್ರೊಫೈಲ್ ನಲ್ಲಿ ಓದಿ. #kvprakashquotes #ವಿಜಯ್_ಗಝಲ್ #ಕನ್ನಡ_ಗಝಲ್

read more
ಜುಲ್ ಕಾಫಿಯಾ ಗಝಲ್: ಗಝಲ್_ಜುಗಲ್ಬಂದಿ
*************************************************
ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆ
ಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ

ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆ
ಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ

ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರ
ಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ

ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣ
ಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ

ಅಲೆಯುತಿವೆ ನಿರಂತರ ನಿಶ್ಯಕ್ತ ಕಾಲ್ಗಳು "ವಿಜಯ"ಪಥದ ಜಾಡು ಹಿಡಿದು
ಅಗಮ್ಯವ ಸೇರುವ ಭ್ರಮೆಯಲ್ಲಿ ಕನಸುಗಳ ಕಮರಿಸುವುದು ಖಾತ್ರಿಯಾಗಿದೆ ಗಝಲ್_ಜುಗಲ್ಬಂದಿ
***************
ಇದು ಕೂಡ ತರಹೀ ಗಝಲ್ ನ ಹಾಗೇನೇ. ಆದರೆ ಮೂಲ ಗಝಲ್ ನ "ಮಿಸ್ರ"ವನ್ನು ಇದರಲ್ಲಿ ಬಳಸಲಾಗುವುದಿಲ್ಲ. ಬದಲಿಗೆ ಒಬ್ಬರು ಬರೆದ ಗಝಲ್ ನ ಭಾವವನ್ನು ಅದೇ ಧಾಟಿಯಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತದೆ.

ಇದರಲ್ಲಿ ಬರಹಗಾರರು ಒಂದೇ "ರದೀಫ್" ನ್ನು ಬಳಕೆ ಮಾಡಬೇಕು, "ಕಾಫಿಯಾ"ಗಳು ಪುನರಾವರ್ತನೆಯಾಗಬಾರದು ಮತ್ತು "ರವಿ" ಒಂದೇ ಇರಬೇಕು.

ಈ ಗಝಲ್ ನ ಇನ್ನೊಂದು ಭಾಗವನ್ನು ನಯನ ಭಟ್ ಜಿ.ಎಸ್❣️ ಅವರ ಪ್ರೊಫೈಲ್ ನಲ್ಲಿ ಓದಿ.

ವಿಜಯ್

ಕನಸುಗಳಿವೆ ನೂರಾರು. ನನಸಾದರೆ ಸಾಕು ಒಂದು ಚೂರು. #kvprakashquotes അക്ഷരക്കൂട്ടിന്റെ തനിമയിലേക്ക് സ്വാഗതം, അക്ഷര കളരിയിലേക്ക് സ്വാഗതം...അക്ഷരങ്ങൾ ✒️ അക്ഷരങ്ങളുടെ എല്ലാ പ്രിയസൗഹൃദങ്ങൾക്കും സന്തോഷവും സ്നേഹവും നിറഞ്ഞ ഉച്ചനേരം ആശംസിക്കുന്നു... #YourQuoteAndMine #അക്ഷരംജീവൻ #അക്ഷരം_Swapnangal #അക്ഷരങ്ങൾക്കൊപ്പം #നിങ്ങളുടെഅക്ഷരങ്ങൾ #അക്ഷരശുഭദിനം #അക്ഷരങ്ങൾ_04_08_2022

read more
ಸೆಳೆವ ಕಂಗಳ ಕಡಲಿನಲ್ಲಿ ಕಳೆದುಹೋಗಬೇಕೆನಿಸಿದೆ
ಸುರಿವ ಮಳೆ ಹನಿಗಳ ನಡುವಲ್ಲಿ ನಡೆಯಬೇಕೆನಿಸಿದೆ.
ಸ್ವಚ್ಚ ಮನದ ಅರಮನೆಯಲ್ಲಿ.., ಬೆಚ್ಚನೆಯ ಭಾವಗಳ ಹೊದಿಕೆಯಲ್ಲಿ ಹುಚ್ಚು ಪ್ರೀತಿಯ ಸವಿಯಬೇಕೆನಿಸಿದೆ. ಕನಸುಗಳಿವೆ ನೂರಾರು. ನನಸಾದರೆ ಸಾಕು ಒಂದು ಚೂರು.
#kvprakashquotes

അക്ഷരക്കൂട്ടിന്റെ തനിമയിലേക്ക് സ്വാഗതം,
അക്ഷര കളരിയിലേക്ക് സ്വാഗതം...അക്ഷരങ്ങൾ ✒️

അക്ഷരങ്ങളുടെ എല്ലാ പ്രിയസൗഹൃദങ്ങൾക്കും സന്തോഷവും സ്നേഹവും നിറഞ്ഞ ഉച്ചനേരം ആശംസിക്കുന്നു...

ವಿಜಯ್

#kvprakashquotes അക്ഷരക്കൂട്ടിന്റെ തനിമയിലേക്ക് സ്വാഗതം, അക്ഷര കളരിയിലേക്ക് സ്വാഗതം...അക്ഷരങ്ങൾ ✒️ അക്ഷരങ്ങളുടെ എല്ലാ പ്രിയസൗഹൃദങ്ങൾക്കും സന്തോഷവും സ്നേഹവും നിറഞ്ഞ ശുഭരാത്രി നേരുന്നു ..! നിങ്ങളുടെ ചിന്താശകലങ്ങളെ അക്ഷരങ്ങളും വാക്കുകളും വരികളുമായി ചിട്ടപ്പെടുത്തി ഞങ്ങളുമായി പങ്കുവയ്ക്കാൻ ഇതാ നിങ്ങൾക്കൊരു സുവർണ്ണാവസരം..!! #YourQuoteAndMine #അക്ഷരംജീവൻ #അക്ഷരം_Swapnangal #അക്ഷരങ്ങൾക്കൊപ്പം #നിങ്ങളുടെഅക്ഷരങ്ങൾ #അക്ഷരങ്ങൾ_03_08_2022

read more
ಬದುಕ ಸವೆಸಲೆಮಗೆ ಅಂಗೈಯಗಲ ತಾಣ,
ಕರಗಿಹೋಗಲು ಕೊನೆಗೆ ನಿಶ್ಚಿತವು ಮರಣ.. #kvprakashquotes

അക്ഷരക്കൂട്ടിന്റെ തനിമയിലേക്ക് സ്വാഗതം,
അക്ഷര കളരിയിലേക്ക് സ്വാഗതം...അക്ഷരങ്ങൾ ✒️ 

അക്ഷരങ്ങളുടെ എല്ലാ പ്രിയസൗഹൃദങ്ങൾക്കും സന്തോഷവും സ്നേഹവും നിറഞ്ഞ ശുഭരാത്രി നേരുന്നു ..!

നിങ്ങളുടെ ചിന്താശകലങ്ങളെ അക്ഷരങ്ങളും വാക്കുകളും വരികളുമായി ചിട്ടപ്പെടുത്തി ഞങ്ങളുമായി പങ്കുവയ്ക്കാൻ ഇതാ നിങ്ങൾക്കൊരു സുവർണ്ണാവസരം..!!

ವಿಜಯ್

ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ. ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ. #kvprakashquotes #ವಿಜಯ್_ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್

read more
ತರಹೀ ಗಝಲ್: ನಯನ ಅವರ ಊಲಾ ಮಿಸ್ರ
*******************************
ಹೃದಯದೂರಲಿ ನೆನಪುಗಳ ನಂದಾದೀಪ ನಿಡುಸುಯ್ದ ಉಸಿರಿಗೆ ಯಾರು ಹೊಣೆ
ತೆರೆದು ತೋರಿಸಿದ ನಿಷ್ಕಲ್ಮಶ ಪ್ರೀತಿಯ ಆಳವನರಿಯದ ನಿಲುವಿಗೆ ಯಾರು ಹೊಣೆ

ಕಾಲ ಗರ್ಭದಲ್ಲಿ ಲೀನವಾಯಿತು ನೀನೆದೆಯೊಳಗೆ ಎರಕ ಹೊಯ್ದ ಪ್ರೀತಿಯ ಎಸಕ
ಕನಿಕರವಿಲ್ಲದೆ ಮನದ ಕದವ ಮುಚ್ಚಲು ಅಸುನೀಗಿದ ಭಾವಗಳಿಗೆ ಯಾರು ಹೊಣೆ

ಮುತ್ತಾಗಿದೆ ಸ್ವಾತಿ ಮಳೆಯ ಹನಿಯಂತೆ ನೀ ಕಿವಿಯಲ್ಲಿ ಉಲಿದ ಒಲವಿನ ಪಲ್ಲವಿ
ಅಂತರಾಳದಲ್ಲಿ ಭೋರ್ಗರೆಯುತ್ತಿರುವ ನನಸಾಗದ ಕನಸುಗಳಿಗೆ ಯಾರು ಹೊಣೆ

ಚಿತ್ತದಲ್ಲಿ ಚಿರಂತನವಾಗಿದೆ ಅಸುನೀಗಿದ ಸುಮಧುರ ಕ್ಷಣಗಳ ಚಿರಸ್ಥಾಯಿ ರೂಪ
ಭರವಸೆಯನ್ನು ಬರಿದಾಗಿಸಿ ಚಿತೆಯೇರಿಸುವ ಚಿಂತೆಯ ನೋವಿಗೆ ಯಾರು ಹೊಣೆ

ಅನುಮಾನ ಅವಮಾನಗಳ ಕೊಂಕು ನುಡಿಗಳೇ ವಿಜಯ ಶಿಖರದ ಮೆಟ್ಟಿಲುಗಳು
ಹಣೆಬರಹವನ್ನು ಹೊಣೆಯಾಗಿಸಿ ಸಾಧಿಸದೆ ಮುಗಿಸಿದ ಬದುಕಿಗೆ ಯಾರು ಹೊಣೆ ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ

ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ.

ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು.

ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ.

ವಿಜಯ್

Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ  ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊 #kvprakashquotes #ವಿಜಯ್_ಗಝಲ್ #ಕನ್ನಡ_ಗಜಲ್ #ತರಹೀ_ಗಝಲ್

read more
ತರಹೀ ಗಝಲ್: ಚೇತನಾ ಅವರ ಊಲಾ ಮಿಸ್ರ
*********************************
ರಕ್ತ ಚರಿತ್ರೆಯಲಿ ಅನುರಕ್ತನಾಗಿಹ ಮನುಜಗೆ ಎಲ್ಲಿದೆ ಮಾನವೀಯತೆ
ಸುಪ್ತ ಮನದಲೂ ವಿಷವ ಬೆರೆಸಿಹ ಮನುಜಗೆ ಎಲ್ಲಿದೆ ಮಾನವೀಯತೆ

ನಿರ್ಭೀತಿಯಿಂದ ಮೆರೆಯುತಿರುವರು ಮನುಜ ಮುಖವಿರಿಸಿದ ರಕ್ಕಸರು
ಹಸುಳೆಯನೂ ಬಿಡದೆ ಪೀಡಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ

ಉಸಿರು ಬಿಗಿಹಿಡಿದು ಕಾಯುತ್ತಿವೆ ಹಿರಿಜೀವಗಳು ಅನಾಥ ಮಂದಿರದಲ್ಲಿ
ಸಂಬಂಧಗಳ ಆಳವನು ತಿಳಿಯದಿಹ ಮನುಜಗೆ ಎಲ್ಲಿದೆ ಮಾನವೀಯತೆ

ಮತಗಳ ನಡುವೆ ಧ್ವೇಷವನು ಬಿತ್ತಿ ಸ್ವಾಸ್ಥ್ಯ ಕದಡುತಿರುವ ಮತಿಹೀನರು
ವನ್ಯ ಜೀವಿಗಳ ತೆರದಿ ವರ್ತಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ

ಅಂಧ ಶ್ರದ್ದೆಯಲಿ ಅಸುವ ತೆಗೆದು ವಿಕೃತಿ ಮೆರೆಯುವುದಲ್ಲ "ವಿಜಯ"
ಭ್ರಮೆಯ ನಾಕದ ಸೃಷ್ಟಿಗೆ ಹೊರಟಿಹ ಮನುಜಗೆ ಎಲ್ಲಿದೆ ಮಾನವೀಯತೆ Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍

ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.

ಅಷ್ಟಕ್ಕೂ ನಿಮ್ಮ  ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁

ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊

ವಿಜಯ್

#kvprakashquotes 𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 𝐀𝐝𝐝 𝐘𝐨𝐮𝐫 𝐁𝐞𝐚𝐮𝐭𝐢𝐟𝐮𝐥 𝐓𝐡𝐨𝐮𝐠𝐡𝐭𝐬..... Please maintain our hashtag #എഴുത്താണി #YourQuoteAndMine #എഴുത്താണി_09062022 #എഴുത്താണി_june09

read more
ನಶ್ವರ ಬದುಕಿದು,
ಇರುವವರೆಗೂ ನನ್ನದು.
ಅಸುನೀಗಿದಾಗ ಕುರುಹೂ ಮಾಯ
ಪದ್ಮಪತ್ರದ ಜಲ ಬಿಂದುವಿನಂತೆ. #kvprakashquotes

𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 
𝐀𝐝𝐝 𝐘𝐨𝐮𝐫 𝐁𝐞𝐚𝐮𝐭𝐢𝐟𝐮𝐥 𝐓𝐡𝐨𝐮𝐠𝐡𝐭𝐬.....


Please maintain our hashtag #എഴുത്താണി

ವಿಜಯ್

#kvprakashquotes 𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 𝐀𝐝𝐝 𝐘𝐨𝐮𝐫 𝐁𝐞𝐚𝐮𝐭𝐢𝐟𝐮𝐥 𝐓𝐡𝐨𝐮𝐠𝐡𝐭𝐬..... Please maintain our hashtag #എഴുത്താണി #YourQuoteAndMine #എഴുത്താണി_22052022 #എഴുത്താണി_may22

read more
ಮಾತು ಮಿತಗೊಳಿಸಿದೆ ಇತರರಿಗೆ ಬೇಸರವಾಗದಿರಲೆಂದು.
ಮುಖದಲ್ಲಿ ನಗು ಅರಳಿಸಿದೆ ಇತರರಿಗೆ ನನ್ನ ನೋವು ತಿಳಿಯದಿರಲೆಂದು.
ಅಭಿನಯದಲ್ಲಿ ಪಳಗಿದೆ. ಆದರೆ ಸತ್ತುಹೋಗಿದ್ದು ಮಾತ್ರ ವ್ಯಕ್ತಿತ್ವ. #kvprakashquotes

𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 
𝐀𝐝𝐝 𝐘𝐨𝐮𝐫 𝐁𝐞𝐚𝐮𝐭𝐢𝐟𝐮𝐥 𝐓𝐡𝐨𝐮𝐠𝐡𝐭𝐬.....


Please maintain our hashtag #എഴുത്താണി
loader
Home
Explore
Events
Notification
Profile