ನವಪರ್ವ ಬಳಗದ ಭಾವಗೀತೆ ಸ್ಪರ್ಧೆಗಾಗಿ ವಿಷಯ-ಸಮಾಗಮ *ನಾಮಕರಣ* ಧರಣಿಯ ಅಂಗಳಕ ಇಳದಾನ ಚೆಂದ್ರಾಮ ಮಂಗಳ ಮೊಗದ ಮಿನಿರಾಮ.. ಸಾಸಿರ ಹೆಣ್ಮನವ ಕದ್ದಾನೋ ನಮ್ಮ ಶಾಮ ಸಿರಿ ಸಗ್ಗವೇ ಇಳದೈತಿ ಆರಾಮ.. ನಲಿಯುವ ಗೊಲ್ಲಗ ಸುರದಾರ ಮಲ್ಲಿಗೆ ಸರ್ದಾರ ಇವನೆಂತ ಬಲಭೀಮ.. ಉಲಿದಾವ ಹಕ್ಕಿ ಇಂಪಿನ ದನಿತೆಗೆದು ಮೊಳಗೈತಿ ನಾದವು ಸರಿಗಮ.. ಮುತ್ತೈದೆ ಮಡಿಲಾಗ ನಸುನಕ್ಕ ಕಂದಮ್ಮ ಕಂಡವರೆದಿಯಾಗ ಉಕ್ಕೇತಿ ಸಂಭ್ರಮ.. ಸುತೈದು ಹಳ್ಳ್ಯಾಗ ಇವನದ್ದೆ ಸುದ್ದಿ ಐತಿ ಆಗೇತಿ ಪ್ರೇಮದ ಸಮಾಗಮ.. ಅಂದದ ಕಂದಗ ಹೆಸರಿಟ್ಟು ಹಾಡ್ಯಾರ ಲಕುಮಿಕಂದಗ ಜೋಜೋ ಅಂದಾರ.. ಬಂದುರ ಬೆಡಗಿನ ಚೆಂದಾನಿ ಚೆಲುವ್ಯಾರು ಮತ್ತೆದ್ದು ಮುದ್ದಾಡಿ ನಗತಾರ.. ಸಗ್ಗಕ್ಕೂ ಭೂಮಿಗೂ ಆಗೈತಿ ಸಂಗಮ ಅಧಿಪತಿ ಇವನೆಂತ ಸುಂದರ.. ಅಕ್ಕರೆಯಿಂದ ತೊದಲ್ನುಡಿದ ಪದ ಕೇಳಿ ಸಕ್ಕರೆ ಸವಿಗಿಣ್ಣು ಉಂಡಾರ.. -ಲಕುಮಿಕಂದ ಮುಕುಂದ ©Lakumikanda Mukunda #ಲಕುಮಿಕಂದ #ನಾಮಕರಣ #ಭಾವಗೀತೆ