ಇರುಳ ಬೇಗೆಯು ಬೆಂಕಿ ಮಳೆಯಂತೆ ಹೊರಗೇನೂ ಸುಡದು ಒಳಗೆ ಬಿಡದು ನಡೆತಪ್ಪಿಸೋ ಉರುಳು ಸಲಿಗೆಬಿಟ್ಟರೆ ಸರ್ವಸಂಗ ಪರಿತ್ಯಾಗಿಯ ಬಿಟ್ಟಿಲ್ಲವದು ಸಂಗದ ಸುಂಕ ಅನವರತ ಬೆಂಬಿಡದು ಆನೆಕೊಟ್ಟರೂ ಬರದಂತ ಅಡಕೆಯದು ಗುಪ್ತಗಾಮಿನಿಯಾಗಿ ಕಂಡರೂ ಕಾಣದು ನರನಾಡಿಯ ಒಳಗೆಲ್ಲ ಬಿಸಿಗಾಳಿ ಬೀಸಿ ತಂಪೆರೆವ ಕರಕಾಗಿ ಏನೆಲ್ಲ ಕೆಸರಾಟ ಕರಿಯ ಕಲೆಯಂತೆ ಕಾಣದ ವ್ಯಕ್ತಿತ್ವಕೆ ಕಳೆವ ಸಾಬೂನು ಎಲ್ಲೆಲ್ಲೂ ಕಾಣದು ಅಪರೂಪಕ್ಕೊಮ್ಮೆ ಬರುವ ಬೀಗನಲ್ಲ ನಿತ್ಯಸಂತೆಯ ಲಜ್ಜೆತೊರೆದ ನೆಂಟ ಅಭಿಮಾನ ಮೀರಿದ ಹುಚ್ಚನಡೆ ಸಲ್ಲ ಕಟ್ಟಿ ಹಾಕದೇ ಮಿಕ್ಕ ನಡೆಯಿಲ್ಲ ವರಸೆ ತೆಗೆಯದೆ ಸರಿಸಿ ಕಾಯಲು ಪನ್ನೀರ ಸುರಿಸೋ ಮಳೆಯು ಬರದಿರದು. #ಕನ್ನಡಕವಿತೆ #ಇರುಳು #ಸಾಂಗತ್ಯ #csmayachari #kannadapoem #poetry