Nojoto: Largest Storytelling Platform

ಇರುಳ ಬೇಗೆಯು ಬೆಂಕಿ ಮಳೆಯಂತೆ ಹೊರಗೇನೂ ಸುಡದು ಒಳಗೆ ಬಿಡದ

ಇರುಳ ಬೇಗೆಯು ಬೆಂಕಿ ಮಳೆಯಂತೆ 
ಹೊರಗೇನೂ ಸುಡದು ಒಳಗೆ ಬಿಡದು 
ನಡೆತಪ್ಪಿಸೋ ಉರುಳು ಸಲಿಗೆಬಿಟ್ಟರೆ 
ಸರ್ವಸಂಗ ಪರಿತ್ಯಾಗಿಯ ಬಿಟ್ಟಿಲ್ಲವದು
ಸಂಗದ ಸುಂಕ ಅನವರತ ಬೆಂಬಿಡದು 
ಆನೆಕೊಟ್ಟರೂ ಬರದಂತ ಅಡಕೆಯದು 
ಗುಪ್ತಗಾಮಿನಿಯಾಗಿ ಕಂಡರೂ ಕಾಣದು 
ನರನಾಡಿಯ ಒಳಗೆಲ್ಲ ಬಿಸಿಗಾಳಿ ಬೀಸಿ 
ತಂಪೆರೆವ ಕರಕಾಗಿ ಏನೆಲ್ಲ ಕೆಸರಾಟ 
ಕರಿಯ ಕಲೆಯಂತೆ ಕಾಣದ ವ್ಯಕ್ತಿತ್ವಕೆ 
ಕಳೆವ ಸಾಬೂನು ಎಲ್ಲೆಲ್ಲೂ ಕಾಣದು 
ಅಪರೂಪಕ್ಕೊಮ್ಮೆ ಬರುವ ಬೀಗನಲ್ಲ 
ನಿತ್ಯಸಂತೆಯ ಲಜ್ಜೆತೊರೆದ ನೆಂಟ 
ಅಭಿಮಾನ ಮೀರಿದ ಹುಚ್ಚನಡೆ ಸಲ್ಲ 
ಕಟ್ಟಿ ಹಾಕದೇ ಮಿಕ್ಕ ನಡೆಯಿಲ್ಲ 
ವರಸೆ ತೆಗೆಯದೆ ಸರಿಸಿ ಕಾಯಲು 
ಪನ್ನೀರ ಸುರಿಸೋ ಮಳೆಯು ಬರದಿರದು. #ಕನ್ನಡಕವಿತೆ #ಇರುಳು #ಸಾಂಗತ್ಯ #csmayachari #kannadapoem #poetry
ಇರುಳ ಬೇಗೆಯು ಬೆಂಕಿ ಮಳೆಯಂತೆ 
ಹೊರಗೇನೂ ಸುಡದು ಒಳಗೆ ಬಿಡದು 
ನಡೆತಪ್ಪಿಸೋ ಉರುಳು ಸಲಿಗೆಬಿಟ್ಟರೆ 
ಸರ್ವಸಂಗ ಪರಿತ್ಯಾಗಿಯ ಬಿಟ್ಟಿಲ್ಲವದು
ಸಂಗದ ಸುಂಕ ಅನವರತ ಬೆಂಬಿಡದು 
ಆನೆಕೊಟ್ಟರೂ ಬರದಂತ ಅಡಕೆಯದು 
ಗುಪ್ತಗಾಮಿನಿಯಾಗಿ ಕಂಡರೂ ಕಾಣದು 
ನರನಾಡಿಯ ಒಳಗೆಲ್ಲ ಬಿಸಿಗಾಳಿ ಬೀಸಿ 
ತಂಪೆರೆವ ಕರಕಾಗಿ ಏನೆಲ್ಲ ಕೆಸರಾಟ 
ಕರಿಯ ಕಲೆಯಂತೆ ಕಾಣದ ವ್ಯಕ್ತಿತ್ವಕೆ 
ಕಳೆವ ಸಾಬೂನು ಎಲ್ಲೆಲ್ಲೂ ಕಾಣದು 
ಅಪರೂಪಕ್ಕೊಮ್ಮೆ ಬರುವ ಬೀಗನಲ್ಲ 
ನಿತ್ಯಸಂತೆಯ ಲಜ್ಜೆತೊರೆದ ನೆಂಟ 
ಅಭಿಮಾನ ಮೀರಿದ ಹುಚ್ಚನಡೆ ಸಲ್ಲ 
ಕಟ್ಟಿ ಹಾಕದೇ ಮಿಕ್ಕ ನಡೆಯಿಲ್ಲ 
ವರಸೆ ತೆಗೆಯದೆ ಸರಿಸಿ ಕಾಯಲು 
ಪನ್ನೀರ ಸುರಿಸೋ ಮಳೆಯು ಬರದಿರದು. #ಕನ್ನಡಕವಿತೆ #ಇರುಳು #ಸಾಂಗತ್ಯ #csmayachari #kannadapoem #poetry

#ಕನ್ನಡಕವಿತೆ #ಇರುಳು #ಸಾಂಗತ್ಯ #csmayachari #kannadapoem poetry