ಸುರಿದ ಮಳೆಯಲಿ ಕೊಚ್ಚಿ ಹೋದವು ಕನಸುಗಳು ಬರಡಾದ ದರಣಿಯ ಹಸಿರಿಗೆ ಉಸಿರಾದ ಹನಿಗಳು ಉರುಳಿವೆ ಧರಿತ್ರಿಯ ತನುಜೆ ದೇಹದಿ ಬಲವಿಲ್ಲದೆ ಪ್ರತಿ ಹನಿಯೂ ಜೀವಾಮೃತ ಜೀವಕೆ ಜಲಚರಗಳಿಗೆ ಜೀವ ಹಿಂಡುತ್ತಲಿದೆ ಜೀವರಕ್ಷಕನಿಗೂ ರಕ್ಕಸನಂತೆ ದನಿ ಇರದ ಮೂಕ ಜೀವಿಗಳ ಗೋಳು ಕೇಳೋರ್ಯಾರು ಕೊಚ್ಚಿ ಹೋದವು ಮನೆ ಮನಗಳ ಬೆಸೆದ ಹಾದಿಯೂ ಬದುಕು ಬಸಿದಿದೆ ಆಶ್ರಯವಿಲ್ಲದೆ ಅನಾಥವಾದವು ಕಂಬನಿ ಮಿಡಿದರೂ ಕಣ್ತೆರಸಲಿಲ್ಲ ಕೈಪಿಡಿವ ಮನಸಿಲ್ಲ ಜಲ ನೈವೇದ್ಯದ ಮಂತ್ರ ಘೋಷದಿ ಮುಳುಗಿಹನವನು ಬಡಜೀವಗಳು ಬಡಿದಾಡಿವೆ ಜೀವದ ಬೇದವೆಣಿಸದೆ ಹಿಡಿಶಾಪವೂ ತೊದಲುತ್ತಿದೆ ಶಿರವು ಮುಳುಗಲ್ತೇಲು.. "ಅವನ ಬಳಿಯು ಇಲ್ಲ ಉತ್ತರ ಕಾಡುತ್ತಿದೆ ಗೊಂದಲಗಳು ನಿರಂತರ " ಫೋಕ್ ಮಾಡಿದ ಆತ್ಮೀಯ ಸ್ನೇಹ ಹೃದಯಿ ಪ್ರತಿ ಮನಸ್ಸಿಗು ನನ್ನ ಮನ ತುಂಬು ಧನ್ಯವಾದಗಳು... ನಿರಂತರ ಖುಷಿಯಿಂದಿರಿ.. ❣️❣️ #ದಿವಾಕರ್ You are alwysz invited to collab #chikey #yqjogi #yqkannada #yqkannadaquotes #yqcollab #yqfriends #YourQuoteAndMine Collaborating with Quote Fellow