ಹಲವರಿಗೆ ಬಡತನದ ದಾಹ ಕೆಲವರಿಗೆ ದೇಹದ ದಾಹ ತಣಿಸುವ ಕಲ್ಲಂಗಡಿಯ ಮೇಲೇಕೆ ಕೋಮುದ್ವೇಷದ ಕಣ್ಣು; ನಡೆಯಿರಿ ರೈತನ ಹೊಲದಲ್ಲೂ ಬೆಳೆದಿರುವ ಕೆಂಪುಹಣ್ಣನ್ನು ಬೀದಿಗೆ ತಂದು ನಾಶಮಾಡೋಣ; ಮನ ಮನಕ್ಕೂ ಕೋಮಿನ ಕಿಚ್ಚು ಹತ್ತಿಸಿ ಕಲ್ಲಂಗಡಿಯನ್ನು ಬೆಳೆದ ರೈತರ ವಿರುದ್ಧ ಯುದ್ಧ ಸಾರೋಣ; ನೆತ್ತರನ್ನು ಹರಿಸಿ ಬೆಳೆದವನಾ ಹಸಿದು ಮಾರುತ್ತಾ ದಾಹ ತಣಿಸಿದವನಾ ಬಾಳಿನ ಹಾದಿಯುದ್ದಕ್ಕೂ ಅತಂತ್ರವ ಸೃಷ್ಟಿಸೋಣ; ನಿಸ್ವಾರ್ಥದಿ ದುಡಿದು ಪುಡಿಗಾಸಿನಲಿ ಬದುಕು ಕಟ್ಟಿಕೊಂಡವರ ಬಾಳಿಗೆ ಬೆಂಕಿ ಹಚ್ಚಿ ಉಳಿದ ಬೂದಿಗಾಗಿ ಕಂಬನಿ ಮಿಡಿದವರ ಎದೆಗೆ ಒದ್ದು ಗಹಗಹಿಸುತಾ ನಿಶೆಯ ರಾತ್ರಿಯಲಿ ಧರ್ಮವ ರಕ್ಷಿಸೋಣ.. #ದಿವಾಕರ್ #ಕಲ್ಲಂಗಡಿ #ರೈತ #ಕೋಮುದ್ವೇಷ #ಕಣ್ಣು #yqjogi #ಕನ್ನಡ #ಕನ್ನಡ_ಬರಹಗಳು ಹಲವರಿಗೆ ಬಡತನದ ದಾಹ ಕೆಲವರಿಗೆ ದೇಹದ ದಾಹ ತಣಿಸುವ ಕಲ್ಲಂಗಡಿಯ ಮೇಲೇಕೆ ಕೋಮುದ್ವೇಷದ ಕಣ್ಣು; ನಡೆಯಿರಿ ರೈತನ ಹೊಲದಲ್ಲೂ ಬೆಳೆದಿರುವ ಕೆಂಪುಹಣ್ಣನ್ನು