ಕೊಳಲನೂದಿದನೇ ಕೃಷ್ಣ ಕೊಳಲ ಊದಿದ ಕೊಳಲನೂದಿದನೇ ಅವನು ಕೊಳಲ ಊದಿದ || ಮನದಿ ಮಿಡಿವ ಮಾತು ಕೇಳಿ,ಮಂದಸ್ಮಿತ ನಗೆಯ ಬೀರಿ ಭಾವಗಳು ತುಂಬಿ ತುಳುಕಿ ||ಕೊಳಲಊದಿದ ಹೊತ್ತು ಮುಳುಗಿದರೂ ರವಿಯು,ಮುಳುಗದೆ ಕಾಯುತಿಹನು ತಣ್ಣನೆ ಹರಿವ ಗಂಗೆ,ಸ್ತಬ್ಧಳಾಗಿಹಳು ಅಲ್ಲೆ ||ಕೊಳಲಊದಿದ ಬೀಗುವ ಬಿದಿರು ಕೂಡ,ಬಾಗಿತಕ್ಕ ನಿಂತಲ್ಲೇನೆ ನಿನ್ನ ನಾದವ ಕೇಳಿ,ನಾಚಿದ ನಾರಿಯರು ||ಕೊಳಲಊದಿದ ಕಣ್ಣ ನೀರು ಸುರಿಸುತ್ತಿತ್ತ,ನೊಂದಿತಕ್ಕ ಎನ್ನ ಚಿತ್ತ ಯಾವ ಜನ್ಮದಿ ಮಿಡಿದ ಕರುಳೋ||ಕೊಳಲ ಊದಿದ ಭವ ಬಂಧನಗಳ ಬಿಡಿಸಲು,ಆಗದ ನಾದವ ನುಡಿಸಿ ನುಡಿಸಿ ಕೊಳಲ ಊದಿದ ಎದೆಯ ಒಳಗೆ ಕೃಷ್ಣ||ಕೊಳಲ ಊದಿದ ಕೊಳಲ ಊದಿದ ಎದೆಯ ಒಳಗೆ ಕೃಷ್ಣ✨ #ಕನ್ನಡಕವನಗಳು #ಕನ್ನಡಕವಿತೆ #yqkannadaquotes #yqkrishnadevotion #yqjogikannada