ಸಲಗ ಪಳಗಿಸಲು ಸಲಗ ಬೇಕು ಅದಕೇನು ಗೊತ್ತು ತಾನು ಮಾಡಿದ್ದು ತನ್ನವರ ಬಂಧನಕೆ ಮೂಕ ಸಾಕ್ಷಿ ನೇತಾರ ಬಂದು ಮತ ಪಡೆದ ನಿಮ್ಮದೇ ಜಾತಿಯವ ತಾನು ಎಂದು ಸಲಗದಂತೆ ಶಾಹಿಯ ಒತ್ತಿದ್ದೆ ಅಂದು ಕಾಣುತ್ತಿರುವೆ ನಮ್ಮವರನೇ ಇಂದು ಕಷ್ಟಗಳ ವ್ಯೂಹದಿ ಸಿಕ್ಕು ಬಳಲುವದ ಜಾತಿಇದೆ ಜೀತವಿದೆ ತಾತ ಮುತ್ತಾತರಿಂದ ನಾಹೇಗೆ ಬಿಡಲಿ ಆಜ್ಜನಿಟ್ಟ ಆಲದಮರ ಕ್ರಾಂತಿ ಮಾಡಿದ ನಮ್ಮಾತನೀಗ ಜಾತಿಬೀಜ ಆಳದ ಬೇರು ಹೊಕ್ಕು ಕೀಳಲಾರದೆ ಉಳಿದಿರುವೆ ಬಿಳಲಿನ ಮಿಥ್ಯ ನೆರಳೊಳಗೆ. #csmayachari #casteism #leaders #ಕನ್ನಡಕವಿತೆ #ಕ್ರಾಂತಿ #ಜಾತಿ #ನಾಯಕರು