#OpenPoetry ರವಿಮಾಮನ ಹಾಡು ಕೇಳುತ ಕುಳಿತು ಸುತ್ತಲಿನ ಇರುವಿಕೆಯ ಮರೆತು ಅಂಗಳಕೆ ಕಣ್ಣಾಡಿಸಿ,ನೆನಪುಗಳ ಸಿಂಪಡಿಸಿ ನಡೆದಾಡಿದೆ ಅತ್ತಿತ್ತ ಏಕೋ ಕಸಿವಿಸಿ ತಂಪಾದ ಸಂಜೆಯಲಿ ಸೊಂಪಾದ ಗಾಳಿಯಲಿ ಎಂದಿಲ್ಲದ ಸಂತೋಷ ಕೆಂದಾವರೆಯ ಕೆನ್ನೆಯಲಿ ಮಳೆನೀರಲಿ ಸೋಕಿದ ಮಣ್ಣಿನ ಘಮಲು ತಂಗಾಳಿಯು ಹೊದ್ದು ನಾಸಿಕಕೆ ತಾಗಿರಲು ಏರಿಯ ಏರಿ ಕೊಡೆಹಿಡಿದು ಬಂದಳು ನಾರಿ ನನ್ನ ಕಣ್ಣೋಟ ಹೋಯಿತು ಅವಳೆಡೆಗೆ ಜಾರಿ ಮುಖದಲಿ ಲಜ್ಜೆ ಕಾಲೊಳಗೆ ಗೆಜ್ಜೆ ಬಿಗುವಿನ ಬಿಂಕಾಟದಿ ಇಟ್ಟಳು ಒಂದೊಂದೆ ಹೆಜ್ಜೆ ಅಲ್ಲಿವರೆಗೆ ಮನದಲಿ ಮೌನದ ನೆರವಣಿಗೆ ಇವಳ ಕಂಡಮೇಲೆ ಶುರುವಾಯ್ತು ಬರವಣಿಗೆ ಬೇಕಿತ್ತು ಮನಕೊಂದು ಮಂದಾರದ ಕಾರಣ ಎಗ್ಗಿಲ್ಲದೆ ಸಾಗಿದೆ ಒಲವಿನ ತೋರಣ ಮಳೆಯೇ ಕಾರಣ ನಾನಾಗಲು ಕಡುಪೋಲಿ ತುಂಟಾಟಕೆ ಹಾಕಲಾಗುತಿಲ್ಲ ಬೇಲಿ ಬುಧ್ಧನಾದನು ಗೌತಮ, ಬಿಟ್ಟು ಆಸೆಯ ನಂಗಾಗುವದು ಎಂದು ಇಳಿಸಂಜೆಯ ಜ್ಞಾನೋದಯ #ಕನ್ನಡಕವಿತೆ #ಕನ್ನಡಕವಿ #ಕನ್ನಡಕವನ #kannadapoem #dreamgirl #salubriousweather