"ನಾನಿಲ್ಲದೆ ಇರಳವಳು ಕಮರುವಳು ಬರಡುವಳು, ಕಂಬನಿಯೂ ಬತ್ತಿರಲು ಅಗಲಿಕೆಯಿಂ ಹಲುಬುವಳು, ನಮ್ಮ ಸಮ್ಮಿಲನಕ್ಕೆ ಸಾಕ್ಷಿ ಈ ಹಚ್ಚಹಸಿರು, ನಮ್ಮಿಬ್ಬರ ಉಸಿರಿಗೆ 'ಪರಿಸರ'ವೆಂದೇ ಹೆಸರು!" ಕಥನ-ಕವನದ ಶೀರ್ಷಿಕೆ: ಮೇಘಮಿಲನ. ಮೋಡ ಕವಿದ ವಾತವರಣಕ್ಕೆ ಭಾವಪರವಶನಾದ ಹುಡುಗ ಆ ಸಂಜೆ ಗೆಳತಿಯೊಡನೆ ವಾಯುವಿಹಾರಕ್ಕೆಂದು ಹೊರಡುತ್ತಾನೆ. ಹೀಗೆ ಅದೆಷ್ಟೋ ನಡೆಯುತ್ತಾ, ಇನ್ನಷ್ಟು ಮಾತನಾಡುತ್ತಾ ಕುಳಿತಿರುವಾಗಲೇ ಕರಿಮೋಡಗಳೆಲ್ಲಾ ಕರಗಿ ಮಳೆ ಸುರಿಯಲಾರಂಭಿಸುತ್ತದೆ. ಇದರಿಂದ ಬೇಸರಗೊಂಡ ಹುಡುಗ ಮೋಡವನ್ನುದ್ದೇಶಿಸಿ ಹೀಗೆ ನುಡಿಯುತ್ತಾನೆ- ಹುಡುಗ: "ಕೂಡುತ್ತಾ ಕೂಡುತ್ತಾ ಬಾನೆಲ್ಲಾ ಮುಸುಕುತ್ತಾ, ಗಾಳಿಗುಣಗಾನಕ್ಕೆ ಚದುರುತ್ತಾ ಕುಣಿಯುತ್ತಾ,