**ಮುಕ್ತಾಯ** ಮನದ ಮುಗ್ಧತೆಯ ಮುಕ್ತಾಯ.... ಇದಕೆ ಇನ್ನಿಲ್ಲ ಪರ್ಯಾಯ.... ನಟ್ಟ ನಡುವೆ ಬಿಟ್ಟು ಹೊರಟವರಿಗೆಲ್ಲ.... ಇಂದಿಗೆ ನನ್ನ ಪ್ರೀತಿಯ ವಿದಾಯ.... ಕಾದ ಹಂಚಲಿ ರೊಟ್ಟಿ ಬೇಯಿಸಿದವರು... ಸಿಕ್ಕ ಸೀರುಂಡೆಯ ಬಾಯಿ ಚಪ್ಪರಿಸಿದವರು... ಒಂದು ತುತ್ತಿಗೆ ಬಾಯಿ ತೆಗೆದಾಗ... ಜಾಣ ಕುರುಡರ ಹಾಗೆ ಬೆನ್ನು ತೋರಿದವರು... ಮಂಕು ಬಡಿದಾಗ ಕೈ ಹಿಡಿದವರಾರು?? ದುಃಖ ಉಮ್ಮಳಿಸಿದಾಗ ನಕ್ಕು ನಲಿಸಿದವರಾರು?? ನನ್ನ ಪಾಲಿನ ಖುಷಿಯನ್ನೂ, ಧಾರೆ ಎರೆದರೂ ಸೋತ ರಾತ್ರಿಗಳಲ್ಲಿ ಪಕ್ಕ ಕುಳಿತಿಲ್ಲ ಯಾರೂ... ಆಟದ ನಿಯಮಗಳು ತಿಳಿದಿಲ್ಲ ನನಗೆ... ಇದು ಆಟವೇ ಎಂಬುದೂ ಅರಿವಿಲ್ಲ ನನಗೆ ಚಕಿತಗೊಳಿಸುವ ಜಾದೂಗಾರನು... ಮಾಯಾಜಾಲವ ಮರೆತ ದುಃಖವು ಕೊನೆಗೆ ಮನಕೆ ಬಿದ್ದ ಕೊಡಲಿ ಪೆಟ್ಟಿಗೆ... ಸಮಾಧಾನದ ಔಷಧ ಹಚ್ಚಿ... ಚೂರು ಸುಟ್ಟ ಜೀವದ ಹಣತೆಗೆ... ಕುಡಿಯನು ಕದಡಿ ದೀಪ ಹಚ್ಚಿ.... #yqbaba #yqhogi #yqjogi #yqkannada #yqquotes #kannadaquotes #ಮುಕ್ತಾಯ