ಮೋಡವೆಲ್ಲಾ ಕವಿದು ಆಕಾಶ ಪೂರ್ತಿ ಕಪ್ಪಾಗಿತ್ತು ದೂರದಲೆಲ್ಲೊ ಗುಡುಗಿನ ಸದ್ದು ಮಳೆ ಬರುವ ಮುನ್ಸೂಚನೆ ಆದರು ಹನಿಗಳು ಧರೆಗಳಿಯುತ್ತಿಲ್ಲಾ ಎಲ್ಲಿಂದಲೋ ಬರದಿಂದ ಬೀಸುವ ಗಾಳಿಗಳು ಮೋಡಗಳ ಚದುರಿಸುವ ಪ್ರಯತ್ನ ಮಾಡುತ್ತಿದೆ ಹಾಗೇ ಇಂದೆಕೋ ಮನಸ್ಸಿಗೆ ಏನೋ ಒಂದು ಗೊಂದಲದ ಕಪ್ಪು ಕವಿದಂತಾಗಿತ್ತು ಕಿಟಕಿ ಸರಳುಗಳ ಹಿಡಿದು ನಿಂತವಳಿಗೆ ಹೊರಗಿನ ವಾತಾರಣಕ್ಕೂ ತನ್ನ ಮನಸ್ಸಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂದೆನಿಸಿತು
ಹೀಗೆ ಏನೋ ಒಂದು ಅಸ್ಥಿರತೆ ಕಾಡಿದಾಗಲೆಲ್ಲಾ ನಾನು ಹುಡುಕಿ ಹೊರಡುತ್ತಿದ್ದದ್ದು ಅಲ್ಲೇ ತುಸು ಹತ್ತಿರವಿದ್ದ ಕೃಷ್ಣನ ಮಂದಿರಕ್ಕೆ ಅವಳ ಪಾಲಿಗದು ನೆಮ್ಮದಿಯ ತಾಣ ಇಂದು ಹಾಗೆ ನಿಧಾನಕ್ಕೆ ಹೆಜ್ಜೆ ಹೊರಗಿಟ್ಟಳು ಒಳಗಿಂದಲೇ ಅಪ್ಪನ ಕೂಗು ಮಗಳೇ ನಿಧಾನ ಮಳೆ ಬರುವ ಹಾಗಿದೆ ಎಂದು ತಿರುಗಿ ನಸು ನಕ್ಕು ಮತ್ತೆ ನಡೆದಳವಳು.
ದೇವರು ಅನ್ನುವುದಕ್ಕಿಂತ ಅವನು ಅವಳಿಗೊಂತರ ಗೆಳೆಯ ನೋವು ನಲಿವುಗಳಿಗೆ ಪಾಲುದಾರ ಆದರು ಯಾಕೋ ಇಂದು ಅವನೆದುರು ಒಂದು ಪದಗಳು ಬರುತ್ತಿಲ್ಲಾ ಹೊರಗಡೆ ಬಿಡದೆ ಸುರಿವ ಮಳೆ ಅವಳ ಕಣ್ಣುಗಳಲ್ಲಿ ಕೂಡ ತುಸು ಮಳೆ ಕಡಿಮೆಯಾದಂತಾಯಿತು ಸುಮ್ಮನೆ ಮೌನದಿ ಎದ್ದು ಹೊರಗೆ ನಡೆದಳು
ಅವನೋ ಕುಳಿತಲ್ಲೇ ಮೌನವಾಗಿ ನಗುತ್ತಲಿದ್ದ ಎಲ್ಲಾ ಬಲ್ಲವನಲ್ಲವೇ...!!!!!!
ಅಲ್ಲೇ ಪಕ್ಕದಲ್ಲಿ ಪ್ರಶಾಂತವಾಗಿ ಹರಿವ ನದಿ ಅದರ ಬಳಿ ಅರಳಿ ನಿಂತ ಕೃಷ್ಣನ ಪ್ರಿಯ ಪಾರಿಜಾತ ವೃಕ್ಷ ಕೆಳಗೊಂದು ಕಲ್ಲು ಬೆಂಚು ಸುಮ್ಮನೆ ಬಂದು ಕುಳಿತಳು ಇಲ್ಲಿಂದಲೇ ಅಲ್ಲವೇ ನನ್ನ ಬದುಕಿನ ಪ್ರತಿ ಮಜಲುಗಳು ಶುರುವಾಗಿದ್ದು ಎಂದು ನೆನೆದು ವಿಷಾದದ ನಗುವೊಂದು ಹಾದು ಹೋಯಿತು ಮನಸ್ಸು ನೆನಪಿನಾಳಕ್ಕಿಳಿಯಿತು
#kannada#kannadaquotes#yqjogi_kannada#ರಾಧೆ