ಮುಚ್ಚಿಟ್ಟ ಮೌನವದು ಮಾತುಗಳಾಗಿ ಪರಿವರ್ತನೆಯಾದಾಗಲೇ ಮನಸ್ಸಿನ ಭಾರವದು ಹಗುರಾಗುವುದು..🤩 ಹೇಳಿಕೊಳ್ಳಲಾರದಂತಹ ಸಮಸ್ಯೆ ಯಾವುದೂ ಇಲ್ಲ ಹೇಳಿ ಕೇಳಿ ಅರಿತು ಪರಿಹಾರವನ್ನು ಹುಡುಕುವ ಮನಸ್ಸಿರಬೇಕಷ್ಟೆ..! ನೋವುಗಳು ತಾತ್ಕಾಲಿಕ ಕಷ್ಟಗಳು ಅರೆಕಾಲಿಕ ಅದೆಲ್ಲವನ್ನೂ ದಾಟಿ ಹೊರಬಂದು ಬಾಳು ನಡೆಸಿದರಷ್ಟೇ ಪೂರ್ಣಕಾಲಿಕ ನೆಮ್ಮದಿಯದು ಶಾಶ್ವತವಾಗಿ ದೊರೆಯುವುದು..❤️💙 ಬೇಸರಿಕೆಯನ್ನೇ ಬಂಧುವನ್ನಾಗಿಸಿಕೊಂಡರೆ ಇರುವ ನೆಮ್ಮದಿಯೂ ಕೂಡಾ ಹದಗೆಟ್ಟು ಆತ್ಮಸ್ಥೈರ್ಯವೇ ಉಡುಗಿಹೋಗುವುದು..❤️ ಭರವಸೆಯಿರಲಿ ನಿಮ್ಮಲ್ಲಿ ಬದುಕೇ ತೀರುವೆನೆಂಬ ಛಲದಲ್ಲಿ ಬಾಳಿಬಿಡು ನೀ ಮುಗುಳ್ನಗುತಲಿ..💐💐😍 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಸವಾಲುಗಳು #ಕುಗ್ಗದ_ತಾಳ್ಮೆ #ಬಾಳುವ_ಜಾಣ್ಮೇ