Nojoto: Largest Storytelling Platform

ಎನಿಲ್ಲ ಇಲ್ಲಿ ಈ ಬದುಕಿನಲ್ಲಿ ಮಿಡುಕಾಡುತ್ತಿತ್ತೊಂದು ಚಿಂತ

ಎನಿಲ್ಲ ಇಲ್ಲಿ ಈ ಬದುಕಿನಲ್ಲಿ
ಮಿಡುಕಾಡುತ್ತಿತ್ತೊಂದು ಚಿಂತೆ ಮನದಲ್ಲಿ!!

ಲೌಕಿಕ ಜೀವನ ತ್ಯಜಿಸಿ
ಹೋರಟಾನ ಸತ್ಯವನರಸಿ
ಸಂಸಾರ ಭಂಧವ ಹರಿದು
ಹಿರಿದಾದ ಅರಮನೆಯ ತೊರೆದು.!

ಅಲ್ಲೊಬ್ಬ ವೃದ್ದ,ಇಲ್ಲೊಬ್ಬ ರೋಗಿ
ಮತ್ತೊಬ್ಬ ಯೋಗಿ,ಶವಯಾತ್ರೆಯಾಗಿ
ಕಾಡುತಿವೆ ಮನವ,ಆ ನಾಲ್ಕು ದೃಶ್ಯ
ಇತಿಹಾಸದ ಪುಟದಲ್ಲಿ ಬರೆದಾಯ್ತು ಭಾಷ್ಯ..!

ಬುಧ್ದಂ ಶರಣಂ ಗಚ್ಚಾಮಿ
ದಮ್ಮಂ ಶರಣಂ ಗಚ್ಚಾಮಿ
ಸಂಘಂ ಶರಣಂ ಗಚ್ಚಾಮಿ
ಶರಣಂ ಶರಣಂ ಗಚ್ಚಾಮಿ..!

©Lakumikanda Mukunda
  #ಬುದ್ದ #ಲಕುಮಿಕಂದ

#ಬುದ್ದ #ಲಕುಮಿಕಂದ #ಜೀವನ

54 Views