Nojoto: Largest Storytelling Platform

ತುಕ್ಕು ಹಿಡಿದ ಕಿಟಕಿಯ ಸರಳ ಸಂದಿಯಿಂದೆಲ್ಲೋ, ಸೂರ್ಯನ ಕಿರ

ತುಕ್ಕು ಹಿಡಿದ ಕಿಟಕಿಯ ಸರಳ
ಸಂದಿಯಿಂದೆಲ್ಲೋ, 
ಸೂರ್ಯನ ಕಿರಣ ಮೈಯ ತಾಗಿ,
ರಸ್ಟು ಹಿಡಿದ ಕಬ್ಬಿಣದ ಮಂಚದ
ಮೇಲೆ ಮಗುವಂತೆ ಮಲಗಿದ್ದ 
ಅವನು,ಬೆಳಗಾಯಿತು ಎಂದು ಅರಿತು,
ನಿದ್ದೆಯ ಜೊಂಪು ತಲೆಯ ಆವರಿಸಿರಲು,
ದಣಿದ  ಕಂಗಳು ಜಗವ  
ನೋಡಲು ಅನುಮತಿ ನೀಡಿದಿರಲು,
ದಿನದ ಕಾಯಕವ ನೆನೆದು ;
ಹಾಸಿಗೆಯಿಂದ ದೇಹವನೆಳೆದು;
ಕೊರೆವ ಚಳಿಯಲಿ  ನಾಲ್ಕು
ಸೌದೆಯ ಸುರಿದು ಗಾಳಿಯ ಕಣ್ತಪ್ಪಿಸಿ
ಕಡ್ಡಿಯ ಗೀರಿ, ಒಲೆಯ ಊದಿ;
ನೀರ ಬಿಸಿಗೊಳಿಸಿ, ಸುಡುವ ಉದಕದಿ
ಮೈಯ ಕೊಳೆಯ ತೊಳೆದು,
ಶರಟು ಪ್ಯಾಂಟಿನೊಳಗೆ ದೇಹವ ತುರುಕಿ,
ಕಂಕುಳಲ್ಲಿ ಒಂದು ಬ್ಯಾಗಿರಿಸಿ,
ಅಲ್ಲೆಲ್ಲೋ ಯಾವುದೋ ಉಪಹಾರ 
ಮಂದಿರದಿ ಎರಡು ದೋಸೆಯ ಮುರಿದು
ಬಾಯೊಳಿರಿಸಿ, ಕೈಯ ಗಡಿಯಾರವು 
ತಿಳಿಸೆ ಸಮಯ ಓಡುತಿಹದೆಂದು,
ತಂಬಿಗೆಯ ನೀರ ಕುಡಿದು 
ಗಂಟಲ ಸರಿಗೊಳಿಸಿ, ಮೇಲೆದ್ದು ಕಾಲ್ಕಿತ್ತು,
ಓಡುತೋಡುತ ಜನರ ಗುಂಪಿನ
ನಡುವೆ ಮರೆಯಾದ ನೋಡಿ ಮಾನವ.





 ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ

#yqjogi_kannada 
#yqjogi 
#machinelife 
#jeevanapayana 
#sanakannadawrittings
ತುಕ್ಕು ಹಿಡಿದ ಕಿಟಕಿಯ ಸರಳ
ಸಂದಿಯಿಂದೆಲ್ಲೋ, 
ಸೂರ್ಯನ ಕಿರಣ ಮೈಯ ತಾಗಿ,
ರಸ್ಟು ಹಿಡಿದ ಕಬ್ಬಿಣದ ಮಂಚದ
ಮೇಲೆ ಮಗುವಂತೆ ಮಲಗಿದ್ದ 
ಅವನು,ಬೆಳಗಾಯಿತು ಎಂದು ಅರಿತು,
ನಿದ್ದೆಯ ಜೊಂಪು ತಲೆಯ ಆವರಿಸಿರಲು,
ದಣಿದ  ಕಂಗಳು ಜಗವ  
ನೋಡಲು ಅನುಮತಿ ನೀಡಿದಿರಲು,
ದಿನದ ಕಾಯಕವ ನೆನೆದು ;
ಹಾಸಿಗೆಯಿಂದ ದೇಹವನೆಳೆದು;
ಕೊರೆವ ಚಳಿಯಲಿ  ನಾಲ್ಕು
ಸೌದೆಯ ಸುರಿದು ಗಾಳಿಯ ಕಣ್ತಪ್ಪಿಸಿ
ಕಡ್ಡಿಯ ಗೀರಿ, ಒಲೆಯ ಊದಿ;
ನೀರ ಬಿಸಿಗೊಳಿಸಿ, ಸುಡುವ ಉದಕದಿ
ಮೈಯ ಕೊಳೆಯ ತೊಳೆದು,
ಶರಟು ಪ್ಯಾಂಟಿನೊಳಗೆ ದೇಹವ ತುರುಕಿ,
ಕಂಕುಳಲ್ಲಿ ಒಂದು ಬ್ಯಾಗಿರಿಸಿ,
ಅಲ್ಲೆಲ್ಲೋ ಯಾವುದೋ ಉಪಹಾರ 
ಮಂದಿರದಿ ಎರಡು ದೋಸೆಯ ಮುರಿದು
ಬಾಯೊಳಿರಿಸಿ, ಕೈಯ ಗಡಿಯಾರವು 
ತಿಳಿಸೆ ಸಮಯ ಓಡುತಿಹದೆಂದು,
ತಂಬಿಗೆಯ ನೀರ ಕುಡಿದು 
ಗಂಟಲ ಸರಿಗೊಳಿಸಿ, ಮೇಲೆದ್ದು ಕಾಲ್ಕಿತ್ತು,
ಓಡುತೋಡುತ ಜನರ ಗುಂಪಿನ
ನಡುವೆ ಮರೆಯಾದ ನೋಡಿ ಮಾನವ.





 ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ

#yqjogi_kannada 
#yqjogi 
#machinelife 
#jeevanapayana 
#sanakannadawrittings
sahana6329550234285

Sahana~

New Creator

ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ #yqjogi_kannada #yqjogi #machinelife #jeevanapayana #sanakannadawrittings