Find the Best ಶಾಲೆಯನೆನಪು Shayari, Status, Quotes from top creators only on Nojoto App. Also find trending photos & videos about
Kiran D Palankar
ಸಮಯ... ಈ ಸಮಯ ಎಷ್ಟೊಂದು ವಿಚಿತ್ರ. ಈ ಸಮಯ ಯಾಕೆ ಓಡುತ್ತೆ, ಹೇಗೆ ಓಡುತ್ತೆ, ಹೇಗೆ ಬದಲಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಸಮಯದ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ, ಆ ಸಮಯವೂ ಕಳೆದು ಹೋಗಿರುತ್ತದೆ. ಈ ಸಮಯದ ಬಗ್ಗೆ ಯಾರಿಗೂ ತಿಳಿದಿಲ್ಲ, ತಿಳಿಯೋಕು ಆಗೋದಿಲ್ಲ ಬಿಡಿ. ಹುಟ್ಟಿದಾಗ ಏನೂ ತಿಳಿಯದವರಾಗಿದ್ದ ನಮಗೆ, ಸಮಯ ಕಳೆದಂತೆ ಸ್ವಲ್ಪ ಬುದ್ದಿ ಬರಲು ಶುರುವಾಗುತ್ತದೆ. ಆಗ ಸ್ನೇಹಿತರೊಡನೆ ಆಟ ಪಾಠ ಇದೆ ಮಾಡುತ್ತಾ ಇರುತ್ತೇವೆ. ಆಗ ಈ ಸ್ನೇಹಿತರ ಬಗ್ಗೆ, ಸ್ನೇಹದ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ. ಬರೀ ಆಟ ಆಡುವುದು ಮಾತ್ರ ಮುಖ್ಯವಾಗಿರುತ್ತದೆ. ಆ ಸಮಯ ಕಳೆಯುತ್ತ ಶಾಲೆ ಶುರುವಾಗುತ್ತೆ. ಆಗ ಓದುವುದು ಆಡುವುದು ಅಷ್ಟೇ ಸಾಕಾಗಿರುತ್ತದೆ. ಶಾಲೆಯಲ್ಲಿ ಕಲಿಯುವಾಗ ಆಡಿದ ಆಟ, ಕಲಿತ ಪಾಠ, ಮೋಜು ಇದು ಯಾವುದರ ಬಗ್ಗೆಯೂ ಏನು ಅನಿಸುವುದಿಲ್ಲ ಆ ಸಮಯಕ್ಕೆ. ಆ ಆಟ, ಪಾಠ ಇದೆಲ್ಲ ಮುಖ್ಯ ಅನಿಸುವುದು, ಮತ್ತೆ ಈ ಸಮಯ ಮತ್ತೆ ಬರಬೇಕು ಅಂತ ಅನಿಸುವುದು ಆ ಸಮಯ ಮುಗಿದ ಮೇಲೆಯೇ ಅಂದರೆ ಕಾಲೇಜು ಸಮಯದಲ್ಲಿ. ಶಾಲೆಯ ಸಮಯದಲ್ಲಿ, ಕಾಲೇಜಿನ ದಿನಗಳು ತುಂಬಾ ಚೆನ್ನಾಗಿರುತ್ತದೆ, ಹಾಗೆ ಎಂಜಾಯ್ ಮಾಡಬಹುದು, ಈ ರೀತಿ ಮಾಡಬಹುದು ಎಂದೆಲ್ಲ ಯೋಚಿಸುತ್ತಾ ಇರುತ್ತೇವೆ. ಕಾಲೇಜು ಮುಗಿದ ಮೇಲೆ ಕೆಲಸಕ್ಕೆ ಸೇರಿ ಇನ್ನೂ ಆರಾಮ್ ಆಗಿ ಇರಬಹುದು ಅಂತ ಅನಿಸುತ್ತದೆ. ಆದರೆ ಒಂದೊಂದೇ ಮೆಟ್ಟಿಲು ಏರಿದ ಮೇಲೆಯೇ ಗೊತ್ತಾಗುತ್ತೆ ಮೊದಲ ಮೆಟ್ಟಿಲ ಮಹತ್ವ. ಆದರೆ ಆ ಹಿಂದಿನ ಮೆಟ್ಟಿಲ ಮತ್ತೆ ಹತ್ತಲು ಸಾಧ್ಯವಾಗುವುದಿಲ್ಲ. ಈ ಸಮಯ ಬಿಡುವುದು ಇಲ್ಲ. ಈ ಶಾಲೆ, ಕಾಲೇಜುಗಳಲ್ಲಿ ಸಿಕ್ಕಂತ ಗೆಳೆಯರು, ಪಡೆದ ಸಂತೋಷ, ಅನುಭವ, ಮುಂದೆ ಎಂದು ಸಿಗುವುದಿಲ್ಲ. ಶಾಲೆಯ ಸಮಯದಲ್ಲಿ ಕೈಯಲ್ಲಿ ಹಣ ಇರುತ್ತಿರಲಿಲ್ಲ. ಆದರೆ ಖುಷಿಗೆ ಏನು ಕಡಿಮೆ ಇರಲಿಲ್ಲ. ಗೆಳೆಯರೊಡನೆ ಆಡಿದ ಆಟ, ಅನುಭವಿಸಿದ ಸಂತೋಷ, ಪಡೆದ ಅನುಭವ ಇವೆಲ್ಲ ಕೆಲಸಕ್ಕೆ ಸೇರಿ ಎಷ್ಟೇ ಹಣ ಸಂಪಾದಿಸಿದರೂ ಸಿಗುವುದಿಲ್ಲ.
ಲಕುಮಿಕಂದ ಮುಕುಂದ
ನಮ್ಮ ಶಾಲೆ ಎದುರಲ್ಲೆ ಬಾಲಕಿಯರ ಶಾಲೆ ನಡುವೆ ಅಂತರವಿತ್ತು ಎತ್ತರದ ಗೋಡೆ. ಹಾರಿ ಹೋಗಿ ಬೇಟಿಯಾಗುತ್ತಿದೆ ಮಾವನ ಮಗಳ ಕಂಡಾಗಲೆಲ್ಲ ಹಲ್ಕಿರಿದು ಮುತ್ತಿಕ್ಕುತ್ತಿದ್ದಳು ಒಂದು ಮುತ್ತಿಗೆ ಒಂದು ಬೋರೆ ಹಣ್ಣು.. ಇನ್ನು ನೆನಪಿದೆ ಮುತ್ತಿಗಾಗಿ ಶಾಲೆ ತೊರೆದದ್ದು. ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಶಾಲೆಯ ಒಂದು ನೆನಪು. ನಿಮ್ಮ ಶಾಲೆಯ ಒಂದು ನೆನಪನ್ನು ಕೆಲವೇ ಪದಗಳಲ್ಲಿ ಬರೆಯಿರಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)
ಲಕುಮಿಕಂದ ಮುಕುಂದ
ನನ್ನದು ಕನ್ನಡ ಮಾದರಿ ಪ್ರಾಥಮಿಕ ಶಾಲೆ ಬಾಲೆಯರಿಲ್ಲದ ಬರಿ ತುಂಟರ ಶಾಲೆ ನನ್ನ ವ್ಯಕ್ತಿತ್ವ ರೂಪಿಸಿದ ದೇಗುಲ ನಾ ಎಂದರೆ ನನ್ನ ಗುರುವೃಂದಕೆ ಬೆಲ್ಲದಚ್ಚು. ಎಲ್ಲದರಲ್ಲೂ ನನ್ನ ಹೇಸರೇ ಮುಂದು ನೆನಪಿದೆ,ಇನ್ನು ಅಂದು ತರಗತಿ ತೊರೆದು ಹಳ್ಳ ಹಿಡಿದು ಬೋರೆ ಹಣ್ಣ ತಿಂದದ್ದು ಮತ್ತೆ ಅಪರಾಧಿಯಾಗಿ ಏಟು ತಿಂದದ್ದು.. (ಹೇಳ ಹೊರಟರೆ ಸಮಯ ಸಾಲದು ಕ್ಷಮಿಸಿಬಿಡಿ ಹೇಳಲಾರೆ ಎಲ್ಲಾ, ಅವೂ ಮರೆಯದ ನೆನಹು) ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಶಾಲೆಯ ಒಂದು ನೆನಪು. ನಿಮ್ಮ ಶಾಲೆಯ ಒಂದು ನೆನಪನ್ನು ಕೆಲವೇ ಪದಗಳಲ್ಲಿ ಬರೆಯಿರಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)
ನಾಗರಾಜ್ ಪೂಜಾರ್
ಸತ್ತ ಮೇಲೆ ಸ್ವರ್ಗ ಸೇರುತ್ತಾರೆ ಎನ್ನುವುದು ಶುದ್ಧ ಸುಳ್ಳು , ತಾಯಿಯ ಮಡಿಲಿನಿಂದ ಲೋಕದ ಜ್ಞಾನ ತಿಳಿಯದೆ ಮೊದಲ ಬಾರಿ ಶಾಲೆಯ ಮೆಟ್ಟಿಲು ಏರುವ ತನಕ ಮಾತ್ರ ಸ್ವರ್ಗದಲ್ಲಿ ಇದ್ದಂತೆ ! ತದನಂತರ ಜೀವನವೆಂಬ ನರಕಕ್ಕೆ ಬಂದು ಚಿತ್ರಹಿಂಸೆ ಅನುಭವಿಸಿ ಸತ್ತು ಸ್ಮಶಾನ ಸೇರಿ ಮಣ್ಣಲ್ಲಿ ಮಣ್ಣಾಗಬೇಕಷ್ಟೆ . #nagarajpoojar #yqjogi_kannada #ಕನ್ನಡ_ಬರಹಗಳು #ಶಾಲೆಯನೆನಪು #ಸ್ವರ್ಗ #ನರಕ
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto