Find the Best ಬಾಲ್ಯ Shayari, Status, Quotes from top creators only on Nojoto App. Also find trending photos & videos about ಬಾಲà³à²¯ ವಿವಾಹ 2020, ಬಾಲà³à²¯ ವಿವಾಹ ಒಂದೠಸಾಮಾಜಿಕ ಪಿಡà³à²—à³, ಬಾಲà³à²¯ ಜೀವನ, ಬಾಲà³à²¯à²¦ ಬಗà³à²—ೆ ಕವನಗಳà³, ಬಾಲà³à²¯ ವಿವಾಹ ನಿಷೇಧ ಕಾಯà³à²¦à³† 2006,
SMÏLÊ
ಬದುಕೇ ನಿನಗೇನು ಕೊಡಲಿ, ಮರಳಿ ಬಾಲ್ಯ ನಾ ಹೇಗೆ ತರಲಿ! ©SMÏLÊ #boatclub #Childhood #ಬಾಲ್ಯದನೆನಪು #ಬಾಲ್ಯ
ಮೌನ
ಹೊಸದಾದ ತಿಳಿಯದ ಕೌತುಗಳಿಗೆ ಕಣ್ಣರಳಿಸಲು ಕಾಗದದ ದೋಣಿಯಲ್ಲಿ ಬದುಕ ತೇಲಿಸಿ ಆಡಲು ಕಟ್ಟಿದ ಮರಳ ಗೂಡಿನಲಿ ದ್ವೇಷ ಅಸೂಯೆ ಹಂಗಿಲ್ಲದೇ ಬಾಳಲು ಕದ್ದು ತಿಂದ ಹಣ್ಣಿನಲ್ಲೂ ಸ್ನೇಹ ತುಂಬಿ ತಿನ್ನಲು ಜಾತಿ ಧರ್ಮದ ಗೊಡವೆಯಿಲ್ಲದೆ ಎಲ್ಲಾ ಸೇರಿ ನಕ್ಕು ನಲಿಯಲು ಆ ಸುಂದರ ನೆನಪುಗಳ ಸಾಗರ. #ಬಾಲ್ಯ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಮೌನ
ಕಳೆದು ಹೋದ ಕ್ಷಣವೆಲ್ಲಾ ನೆನಪುಗಳಾಗಿ ಮತ್ತೆ ಜೀವಂತ #yqjogi #yqkannadaquotes #anjalishidling #saachi_thoughts #ಬಾಲ್ಯ #ನೆನಪು #YourQuoteAndMine Collaborating with Anjali shidling
ಮೌನ
ನಾವ ಇವಾಗಿಂದಲ್ಲಾ ಆವಾಗಿಂದಾನೂ ಪುಸ್ತಕ ಪ್ರೇಮಿಗಳೇ....😎😎 #yqjogi #yqjogi_kannada #kannadaquotes #kannada #ಬಾಲ್ಯ
ಮೌನ
ಊರಲ್ಲಿ ಇರೋ ಮಕ್ಕಳು ಎಲ್ಲರು ನಮ್ಮ ಫ್ರೇಂಡ್ಸು ಆಗಿದ್ದರು ಮರಕೋತಿ,ಚೆನ್ನಿದಾಂಡು,ಲಗೋರಿ,ಕಣ್ಣ ಮುಚ್ಚಾಲೆ,ಮಣ್ಣಾಟ,ಗಾಳಿಪಟ ಹಾರಸೋದರಿಂದ ಹಿಡಿದು ಮಳೆಗಾಲದಲ್ಲಿ ದೋಣಿ ಮಾಡಿ ಆಡತ್ತಾ, ಮೀನಿಗೆ ಗಾಳ ಹಾಕತಾ ಕಾಡು ಮೇಡು ಅಲಿತಾ ನಮಗೆ ಹೊತ್ತಾಗಿದ್ಥೆ ಗೋತ್ತಾಗತ್ತಿರಲಿಲ್ಲ ನಾವ ಮನೆ ಹೊಕ್ಕೊದು ಸೂರ್ಯ ಮುಳಗಿದ್ದ ಮೇಲೆ ಆಗಿತ್ತು. ಇಲ್ಲ ಅಪ್ಪನೋ ಅಮ್ಮಾನೋ ಕೋಲ ಹಿಡಕೊಂಡು ಹುಡುಕುತ್ತಾ ಬರಬೇಕಿತ್ತು ಜಗಳ ಆದರೆ ಎರಡೆ ನಿಮಿಷ ಮತ್ತೆ ಎಲ್ಲರೂ ಒಂದೆ ಯಾರನ್ನು ಯಾರು ಬಿಟ್ಟಕೋಡತ್ತಿರಲಿಲ್ಲ ರಾತ್ರಿ ಅಮ್ಮನಂದೊ ಅಜ್ಜಿದೊ ಕಾಲ ಮೇಲೆ ಮಲಕೊಂಡು ಆ ಚಂದಮಾಮನ ನೋಡಕೊಂಡು ಕತೆ ಕೇಳತಿದ್ದವಿ ಇವಾಗೆ ಎಲ್ಲರು serial ಅಲ್ಲಿ Busy ಎಷ್ಟ ಚಂದ ಆ ಬಾಲ್ಯ ಈಗೀನ ಮಕ್ಕಳಿಗಿಂತ ನಾವೆ ಅದೃಷ್ಟವಂತರು ಮೊಬೈಲು ವೀಡಿಯೊ ಗೇಮ ಎನು ಇರಲಿಲ್ಲ ಮಳೆಲಿ ನೆನಿಬೇಡ ನೆಗಡಿ ಆಗತ್ತೆ ಮಣ್ಣಲಿ ಆಡಬೇಡ Infection ಆಗತ್ತೆ ಅಂತ ಯಾರು ಹೇಳತ್ತಿರಲಿಲ್ಲ ಈಗೀನ ತರ ಒಳಗೆ ಇರಿ ಹೇಳತ್ತಿರಲಿಲ್ಲ ನಮ್ಮ ಆ ಬಾಲ್ಯನೆ ಎಷ್ಟ ಒಳ್ಳೆ ಇತ್ತು ಅಲ್ವಾ. #ಬಾಲ್ಯ #yqjogi #yqjogi_kannada #kannadaquotes #kannada
ಮೌನ
ಹಗೆತನದ ನೆರಳಿಲ್ಲ ಜಾತೀಯತೆಯ ಗೊಡವೆ ಇಲ್ಲ ನಿಷ್ಕಲ್ಮಶ ಮನದಲ್ಲಿ ಸವಿ ಸ್ನೇಹದ ಸೊಗಸೆ ಎಲ್ಲ... ಮಧುರ ಬಾಲ್ಯದ ನೆನಪುಗಳೆಷ್ಟು ಚಂದ! ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ.
Vinaya Hegde
ಬೆಟ್ಟದ ನೆಲ್ಲಿಕಾಯಿ -ನಿಶ್ಯಬ್ದ (ಕಣ್ಣು ಅಡಿಬರಹದೆಡೆಗೆ) ಹಾ!.. ಇದೇ ಸರಿಯಾದ ಸಮಯ. ಬೆಟ್ಟದಲ್ಲಾದ ಪುಟ್ಟ ಪುಟ್ಟ ನೆಲ್ಲಿಕಾಯಿಗಳನ್ನು ಉಪ್ಪಿಗೆ ಹಾಕಲು. ಕಳೆದ ಬಾಲ್ಯದಲ್ಲಿ ಮರೆಯಲಾಗದ ಒಂದು ಭಾಗ ನನಗೆ ನೆಲ್ಲಿಕಾಯಿ. ನಾವು ಚಿಕ್ಕವರಿದ್ದಾಗ ಈ ಚಾಕಲೇಟು ಮತ್ತೆ ಬಿಸ್ಕತ್ತಿನ ಆಸೆಯೇ ಇರಲಿಲ್ಲ ಅನಿಸುತ್ತದೆ. ಏನಿದ್ದರೂ ಗದ್ದೆ, ತೋಟ, ಬಯಲು-ಬೇಣ, ಕಾಡು-ಗುಡ್ಡಗಳನ್ನು ಸುತ್ತಿ ಅಲ್ಲಿ ಸಿಗುವ ನೆಲ್ಲಿಕಾಯಿ, ನೇರಳೆಹಣ್ಣು, ಸಂಪಿಗೆಹಣ್ಣು, ಮುಳ್ಳೆಹಣ್ಣು, ಪನ್ನೇರಲೆಹಣ್ಣು, ಜಂಬುನೇರಳೆಹಣ್ಣು, ನಾಲಿಗೆಹಣ್ಣು, ಕವಳಿಕಾಯಿ, ಪರಗಿಹಣ್ಣು, ತಾವರೆಗಡ್ಡೆ...ಅಬ್ಬಾ! ಹೇಳಿದಷ್ಟೂ ಮುಗಿಯದ ಉದ್ದ ಸಾಲೇ ಇದೆ. ಇವುಗಳೇ ನನ್ನ ಮತ್ತು ನನ್ನ ಗೆಳೆಯನ ನೀಗದ ಹಸಿವಿಗೆ ಬಲಿಪಶು
Kiran D Palankar
ಮತ್ತೆ ಮತ್ತೆ ನೆನಪಾಗುತ್ತಿದೆ ಬಾಲ್ಯ ಸಿಗದಾಗಿದೆ ಎಷ್ಟು ಕೊಟ್ಟರೂ ಮೌಲ್ಯ ನೀರಲ್ಲಿ ಬಿಟ್ಟ ಆ ಕಾಗದದ ದೋಣಿ ಸ್ನೇಹಿತರೊಂದಿಗೆ ತಿರುಗುತ್ತಿದ್ದ ಆ ಓಣಿ ಬಾಲ್ಯದಲ್ಲಿ ಆಡುತ್ತಿದ್ದ ಆ ಆಟ ರಾತ್ರಿ ಹೆದರಿಸುತ್ತಿದ್ದ ದೆವ್ವದ ಕಾಟ ನೆನಪಾಗಿ ಕಣ್ಣ ಮುಂದೆ ಬಂದಂತಿದೆ ಆ ಕ್ಷಣ ಮತ್ತೆ ಸಿಗುತ್ತಿಲ್ಲವಲ್ಲ ಎಂದು ಮರುಗಿದೆ ನನ್ನೀ ಮನ ಬಾಲ್ಯದ ಸಿಹಿ ನೆನಪುಗಳು #ಬಾಲ್ಯ #ಬಾಲ್ಯದನೆನಪು #ಕಿರಣನ_ಸಾಲು #yqjogi #yqkannada #ಕನ್ನಡ
Madhukar Tr
ಶಿಶುವಾಗಿ ಒದಾಡುತಾ... ಮಗುವಾಗಿ ತೆವಳುತಾ... ವಯಸ್ಕನಾಗಿ ಕಲಿಯುತಾ... ಹಿರಿಯನಾಗಿ ನಡೆಸುತಾ... ಮುದುಕನಾಗಿ ಒದಾಡುತಾ.. ಹಣ್ಣು ಹಣ್ಣು ಮುದುಕನಾಗಿ ತೆವಳುತಾ... ಮತ್ತೆ ಮಗುವಾಗಿ ಹೋಗುತ್ತೆ ಈ ದೇಹ ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #collab #collabwithjogi #YourQuoteAndMine Collaborating with YourQuote Jogi #firstquote
Chidanand Mayachari
ಸಾಗಿಮಾಗಿದೆ ಜೀವ ನಿರೀಕ್ಷೆಗಳ ಹೊರೆಹೊತ್ತು ಬಿಸಿಲ್ಗುದುರೆ ಭ್ರಮಾಂತುಕ ಆಟ ನೋಡದೆಎತ್ತ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ. ಜಯಾಪಜಯದ ಬ್ರಮೆಗವಿಸಿ ಹೆಜ್ಜೆ ನೊರೆಂಟು ಮಾನಾಪಮಾನದ ಕಾರ್ಕೋಟಕ ಕುಡಿದು ಬೋರಾಟ ನೊಂದಿದ್ದಿದೆ ಕುಂದಿದ್ದಿದೆ ಬಂದಂತ ಪಥಗುಂಟ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ. ಮೊಗದಲ್ಲಿ ನಗೆಯು ಮನಸಲ್ಲಿ ಸೊಗಸು ನಾಳೆ ಏನೆಂಬ ಎಲ್ಲ ಚಿಂತೆಗಳ ಮಾಜಿಸಿ ಸೋಲೇನು ಗೆಲುವೇನು ಸಮತೆ ಸಿದ್ಧಿಸಿ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ . ಬೇಕಾದ್ದು ಪಡೀಬೇಕು ರಂಪರಾದ್ಧಾಂತ ನಡೆದು ತೇಲಬೇಕು ಕಲ್ಪನೆಗಳ ಸರಮಾಲೆ ಮುಡಿದು ಆಡಬೇಕು ಧನಕನಕದ ಮಹಾಮಹ ತೊಡೆದು ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ ಸುಖದ ವ್ಯಾಖ್ಯಾನ ಗೊಣಗುಡದೆ ಮುಗ್ಧವಾಗಿ ಕಾಮವಾಂಛೆಯ ಭ್ರಮರವೃತ್ತಿಯ ಸೊಲ್ಲನೀಗಿ ಗುಮ್ಮನ ಭಯದಲ್ಲಿ ಅಮ್ಮನ ಮಡಿಲಲ್ಲಿ ಮಲಗಿ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ ಸಾಗಿಮಾಗಿದೆ ಜೀವ ನಿರೀಕ್ಷೆಗಳ ಹೊರೆಹೊತ್ತು ಬಿಸಿಲ್ಗುದುರೆ ಭ್ರಮಾಂತುಕ ಆಟ ನೋಡದೆಎತ್ತ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ. ಜಯಾಪಜಯದ ಬ್ರಮೆಗವಿಸಿ ಹೆಜ್ಜೆ ನೊರೆಂಟು ಮಾನಾಪಮಾನದ ಕಾರ್ಕೋಟಕ ಕುಡಿದು ಬೋರಾಟ ನೊಂದಿದ್ದಿದೆ ಕುಂದಿದ್ದಿದೆ ಬಂದಂತ ಪಥಗುಂಟ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ.